ಹಿರಿಯೂರು: ತಾಲ್ಲೂಕಿನ ಯಲ್ಲದಕೆರೆ, ನಾಯಕರಕೊಟ್ಟಿಗೆ, ಕೆರೆ ಕೆಂಚಯ್ಯನಹಟ್ಟಿ, ತಳವಾರಹಟ್ಟಿ, ಸೀಗೆಹಟ್ಟಿ, ಹಂದಿಗನಡು, ಬ್ಯಾರಮಡು, ಅರಿಶಿಣಗುಂಡಿ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ 7.40ರ ಸಮಯದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಹಿಂದಿನ ಐದು ದಿನಗಳಲ್ಲಿ ಮೂರನೇ ಬಾರಿ ಈ ರೀತಿ ಕಂಪನ ಆಗಿರುವ ಕಾರಣದಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ್ದ ಜಿ.ಪಂ. ಮಾಜಿ ಅಧ್ಯಕ್ಷ ಎಂ. ಜಯಣ್ಣ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲಾಧಿಕಾರಿ ತಕ್ಷಣ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಈ ರೀತಿಯ ಕಂಪನಕ್ಕೆ ಕಾರಣವನ್ನು ಕಂಡು ಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಂದು ಯಾದವ ಸಭೆ
ಹಿರಿಯೂರು: ಮೇ 5ರಂದು ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯಾದವ ಜನಾಂಗದವರು ಕೈಗೊಳ್ಳಬೇಕಿರುವ ತೀರ್ಮಾನದ ಬಗ್ಗೆ ಚರ್ಚಿಸಲು ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ವೇದಾವತಿ ಬಡಾವಣೆಯಲ್ಲಿರುವ ಯಾದವ ಹಾಸ್ಟೆಲ್ನಲ್ಲಿ ಏ. 6 ರಂದು ಬೆಳಿಗ್ಗೆ 11ಕ್ಕೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಡಿ. ಬಸವರಾಜು ತಿಳಿಸಿದ್ದಾರೆ.