ಇದನ್ನು ಮಕ್ಕಳಿಗೆ ಹೇಗೆ ತಿಳಿಸುತ್ತೀರಿ. ಶಾಲಾ ಆವರಣವನ್ನು ನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವುದು ಶಾಲಾ ನಿಯಮವೇ ಆಗಿದೆ. ನಮ್ಮ-ನಮ್ಮ ಸಮಸ್ಯೆಗಳಿಗೆ ಮತ್ತೊಬ್ಬರನ್ನು ದೂರುವುದು ಅರ್ಥವಿಲ್ಲ ಎಂದು ತಿಳಿಸಿದರು. ಶಿಕ್ಷಕ ಪಿ.ಎಚ್. ತಿಮಲಾಪುರ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.
ತಾ.ಪಂ. ಸದಸ್ಯ ಸೋಮಪ್ಪ ಸಿದ್ಲಿಂಗಪ್ಪನವರ, ಗ್ರಾ.ಪಂ. ಅಧ್ಯಕ್ಷೆ ಕುಸುಮವ್ವ ಕೆಳಗಿನಮನಿ, ಗ್ರಾ.ಪಂ. ಉಪಾಧ್ಯಕ್ಷ ಮಂಜಪ್ಪ ಮಡಿವಾಳರ, ಗ್ರಾ.ಪಂ. ಸದಸರಾದ್ಯ ಹಾಲನಗೌಡ ಮುದಿಗೌಡ್ರ, ವೀರಪ್ಪ ಗುರಪ್ಪನವರ, ಖಾಸೀಂಸಾಬ್ ರಟ್ಟೀಹಳ್ಳಿ, ನಿಂಬವ್ವ ಚೀಲೂರ, ಜೈನುಬಿ ಬಡಗಿ, ಕರಿಯಮ್ಮ ತಳವಾರ, ಜುಬೇದಾಬಿ ಜಂಬೂರ, ಶಿವನಗೌಡ ರೋತಿ, ಮಲ್ಲಪ್ಪ ಬಣಕಾರ,
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಶಿವಪ್ಪನಾಯಕ, ಮಹೇಶ ನಾಯ್ಕ, ಆರೋಗ್ಯ ಕಾರ್ಯಕರ್ತೆ ನಂದನ ಜವಳಿ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರಭಾವತಿ ಮತ್ತು ಅನುಷಾ ಪ್ರಾರ್ಥನಾ ಗೀತೆ ಹಾಡಿದರು. ಪಿಡಿಓ ಎಚ್. ಗುರುಪ್ರಸಾದ ಸ್ವಾಗತಿಸಿದರು. ಪಿ.ಎಚ್. ತಿಮಲಾಪುರ ನಿರೂಪಿಸಿದರು.