ಬೆಂಗಳೂರು: ಹಿರೋಶಿಮಾ– ನಾಗಾಸಾಕಿ ಮೇಲೆ ಬಾಂಬ್ ದಾಳಿಯ 69ನೇ ವರ್ಷದ ಶೋಕಾಚರಣೆ ಅಂಗವಾಗಿ ಜಪಾನ್ನ ಬಾರ್ನ್ಫ್ರೀ ಕಲಾ ಶಾಲೆ ನಗರದ ‘ನಮ್ಮ ಮೆಟ್ರೊ’ ರಂಗೋಲಿ ಕಲಾಕೇಂದ್ರದಲ್ಲಿ ಶನಿವಾರ ಚಿತ್ರ ಬಿಡಿಸುವ ಕಾರ್ಯಕ್ರಮ ಏರ್ಪಡಿಸಿತ್ತು.
ಕಲಾವಿದರು, ಜಪಾನ್ ಮತ್ತು ನಗರದ ಶಾಲೆಗಳ ವಿದ್ಯಾರ್ಥಿಗಳು ಒಂದೇ ಕ್ಯಾನ್ವಾಸ್ನಲ್ಲಿ ಚಿತ್ರ ಬಿಡಿಸಿದರು. ಜಪಾನ್ನ ಬಾರ್ನ್ಫ್ರೀ ಕಲಾ ಶಾಲೆಯ ರೇನಾ ಮಸುಯಾಮ , ‘ಹಿರೋಶಿಮಾ– ನಾಗಾಸಾಕಿ ಮೇಲೆ ಬಾಂಬ್ ದಾಳಿಯನ್ನು ಇಂದಿಗೂ ಯಾರೂ ಮರೆತಿಲ್ಲ. ಆ ಕರಾಳ ಘಟನೆ ಪರಿಣಾಮವನ್ನು ಇನ್ನೂ ಜಪಾನಿಗರು ಎದುರಿಸುತ್ತಿದ್ದಾರೆ’ ಎಂದರು.