ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಬನೊಬ್ಬನ ಹಿನ್ನೋಟಗಳು

Last Updated 22 ಜನವರಿ 2011, 10:30 IST
ಅಕ್ಷರ ಗಾತ್ರ

ಚನ್ನಪಟ್ಟಣದ ಸ್ವಪ್ರಭಾನಂದ ಅವರು ವೃತ್ತಿಯಿಂದ ವರ್ತಕರು. ಸಾಹಿತ್ಯ, ಸಂಸ್ಕೃತಿ ಅವರ ಗೌರವಕ್ಕೊಳಗಾದ ಕ್ಷೇತ್ರಗಳು. ವ್ಯಾಪಾರದಲ್ಲಷ್ಟೇ ಮುಳುಗದೆ, ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಹೃದಯಿಗಳು ಅವರು. ಸುಮಾರು ಐವತ್ತು ಅರವತ್ತು ವರ್ಷಗಳ ಅವರ ಸಾಂಸ್ಕೃತಿಕ ಚಟುವಟಿಕೆಗಳ ನೆನಪುಗಳು ‘ಹುಂಬನೊಬ್ಬನ ಹಿನ್ನೋಟಗಳು’ ಕೃತಿಯಲ್ಲಿ ಸಂಕಲನಗೊಂಡಿವೆ. ಬೇಂದ್ರೆ, ಕಾರಂತ, ಕೆ.ಎಸ್.ನರಸಿಂಹಸ್ವಾಮಿ ಅವರಂಥ ಲೇಖಕರನ್ನು ಚನ್ನಪಟ್ಟಣಕ್ಕೆ ಕರೆಸಿ ಒಡನಾಡಿದ ಹೆಮ್ಮೆ ಶರ್ಮರದು. ಈ ಕೃತಿ ಶರ್ಮರ ಸರಳತೆ, ಜೀವನಪ್ರೀತಿ ಹಾಗೂ ಸಾತ್ವಿಕ ಸ್ವಭಾವದ ಅಕ್ಷರರೂಪದಂತಿದೆ. ಶರ್ಮರು ತಮ್ಮನ್ನು ತಾವು ಹುಂಬ ಎಂದು ಕರೆದುಕೊಳ್ಳುವುದನ್ನು ನೋಡಿದರೆ, ಇಂಥ ಹುಂಬರು ಊರಿಗೊಬ್ಬರಾದರೂ ಇರಬೇಕು ಎನ್ನಿಸುತ್ತದೆ.

ಹುಂಬನೊಬ್ಬನ ಹಿನ್ನೋಟಗಳು
ಲೇ: ಬಿ.ಪಿ.ಸ್ವಪ್ರಭಾನಂದ ಶರ್ಮ; ಪು:192; ಬೆ: ರೂ. 150; ಪ್ರ: ಗಿರೀಶ್ ಪ್ರಕಾಶನ, 172, ಶಾರದಾ ನಿಲಯ, ರೆಡ್ಡಿಗೇರಿ, ಚನ್ನಪಟ್ಟಣ,ರಾಮನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT