ಹುಮನಾಬಾದಿನ ವಾಂಜ್ರಿ ಪ್ರದೇಶದ ಐ.ಡಿ.ಎಸ್.ಎಂ.ಟಿ ಉದ್ಯಾನ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ಈ ಮಕ್ಕಳ ಪಾಲಕರು ವಾಸಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಬೆಳಿಗ್ಗೆ ಎಂದಿನಂತೆ ಕಟ್ಟಿಗೆ ಆಯಲು ಈ ಮಕ್ಕಳು ಒಟ್ಟಾಗಿ ಹೋಗಿದ್ದರು.
ಯುವರಾಜ ಬಾದಲ್ ಈಜಾಡಲು ಕೆರೆಗೆ ಇಳಿದಿದ್ದಾನೆ. ಆತ ಮರಳಿ ಬಾರದಿದ್ದಾಗ ಗಾಬರಿಗೊಂಡು ಆತನ ರಕ್ಷಣೆಗೆ ಧಾವಿಸಿದ ರೂಪಾ, ಲತಾ ಹಾಗೂ ಪೂಜಾ ಕೂಡಾ ನೀರು ಪಾಲಾದರು. ಈ ನಾಲ್ವರೂ ಮುಳುಗಿರುವ ವಿಷಯವನ್ನು ಇವರೊಂದಿಗೆ ಹೋಗಿದ್ದ ಇನ್ನುಳಿದ ಮಕ್ಕಳು ಪಾಲಕರ ಗಮನಕ್ಕೆ ತಂದರು.
‘ನುರಿತ ಈಜುಗಾರರ ನೆರವಿನಿಂದ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು’ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಪ್ರಭಾಕರ ಕುಲಕರ್ಣಿ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಅನಿಲಕುಮಾರ ತಿಳಿಸಿದರು. ಪರಿಹಾರದ ಭರವಸೆ: ಪ್ರಾಣ ಕಳೆದುಕೊಂಡ ಮಕ್ಕಳ ಪಾಲಕರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ರೂ 1 ಲಕ್ಷ ಪರಿಹಾರ ಕೊಡಿಸಲಾಗುವುದು ಎಂದು ಸಂಸದ ಎನ್.ಧರ್ಮಸಿಂಗ್, ಶಾಸಕ ರಾಜಶೇಖರ ಬಿ.ಪಾಟೀಲ ಭರವಸೆ ನೀಡಿದ್ದಾರೆ. ಶಾಸಕ ನೆರವು: ಮೃತ ಮಕ್ಕಳ ಅಂತ್ಯಕ್ರಿಯೆಗಾಗಿ ಶಾಸಕ ಪಾಟೀಲರು ವೈಯಕ್ತಿಕವಾಗಿ ತಲಾ ರೂ 5 ಸಾವಿರ ನೀಡಿದ್ದಾರೆ.