ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಇದೆ ಎಚ್ಚರಿಕೆ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿಯ ರೇಡಿಯೊ ಪಾರ್ಕ್ ಬಳಿಯ ಪ್ರಾಣಿ ಸಂಗ್ರಹಾಲಯದಲ್ಲಿ ಮಗುವೊಂದು ಹುಲಿಗೆ ಚಾಕೋಲೆಟ್ ನೀಡಲು ಮುಂದಾಗಿ ಕೈ ಕಳೆದುಕೊಂಡಿರುವ ಘಟನೆ ವಿಪರ್ಯಾಸದ ಸಂಗತಿಯಾಗಿದೆ.

ಇದು ಅಲ್ಲಿನ ಸಿಬ್ಬಂದಿ ವರ್ಗದ ಮತ್ತು ಮಗುವಿನ ಪಾಲಕರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಪ್ರಾಣಿ ಸಂಗ್ರಹಾಲಯಕ್ಕೆ ನಿತ್ಯ ನೂರಾರು ಜನ ಭೇಟಿ ಕೊಡುತ್ತಾರೆ. ಆದ ಕಾರಣ ಅಲ್ಲಿ ಮುನ್ನೆಚ್ಚರಿಕೆ  ಕ್ರಮ ಬೇಕು.

ಸಿಬ್ಬಂದಿ ವರ್ಗದವರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾರೂ ಬೋನಿನ ಹತ್ತಿರ ಹೋಗದಂತೆ ನಿಷೇಧ ಸೂಚನಾ ಫಲಕಗಳನ್ನು ಹಾಕಬೇಕು. ಯಾರೂ ಅದನ್ನು ಉಲ್ಲಂಘಿಸದಂತೆ ಎಚ್ಚರ ವಹಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT