ಅಹಮದಾಬಾದ್, (ಐಎಎನ್ಎಸ್): ಉತ್ತರ ಪ್ರದೇಶದಲ್ಲಿ ಕಲಾವಿದರೊಬ್ಬರು ಎಂ.ಎಫ್.ಹುಸೇನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಿರ್ಮಿಸುತ್ತಿದ್ದ ಮರಳು ಶಿಲ್ಪವನ್ನು ದುಷ್ಕರ್ಮಿಗಳು ಶುಕ್ರವಾರ ನಾಶ ಮಾಡಿದ್ದಾರೆ.
ಪ್ರಸಿದ್ಧ ಮರಳು ಶಿಲ್ಪಿ ಆರ್.ಕೆ.ಚಿತೆರಾ ಎಂಟು ಅಡಿ ಉದ್ದದ ಶಿಲ್ಪವನ್ನು ಗಂಗಾ ನದಿ ದಂಡೆಯಲ್ಲಿ ನಿರ್ಮಿಸುತ್ತಿದ್ದರು. ಅದಿನ್ನೂ ಅಪೂರ್ಣವಾಗಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿದೆ.
`ದೂರದಲ್ಲಿ ಗುಂಪೊಂದು ನನ್ನನ್ನು ಗಮನಿಸುತ್ತಿತ್ತು. ಬಳಿಕ ಸುಮಾರು ಮೂರು ಜನ ನನ್ನತ್ತ ಓಡಿ ಬಂದು ಕಾಲಿನಿಂದ ಶಿಲ್ಪವನ್ನು ಹಾಳು ಮಾಡಿದರು~ ಎಂದು ಚಿತೆರಾ ಸುದ್ದಿಗಾರರಿಗೆ ತಿಳಿಸಿದರು. `ನಾನು ಹುಸೇನ್ ಅವರಿಗೆ ಗೌರವ ಸಲ್ಲಿಸಲು ಯಾವುದೇ ಕಾರ್ಯಕ್ರಮ ಏರ್ಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನೂ ಅವರು ಒಡ್ಡಿದರು~ ಎಂದು ಹೇಳಿದರು.