ಜಿಂದ್ (ಹರ್ಯಾನಾ), (ಪಿಟಿಐ): ಹರ್ಯಾನಾ, ಪಂಜಾಬ್, ರಾಜಸ್ತಾನ ಮತ್ತು ಉತ್ತರ ಪ್ರದೇಶದ ಸುಮಾರು 300 ಮುಖಂಡರು ಸೇರಿದ್ದ ಜಾತಿ ಮಹಾಪಂಚಾಯತ್ನಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕಠಿಣ ನಿಲುವು ತಳೆಯಲಾಯಿತಲ್ಲದೆ, ಇಂಥ ಹೀನ ಕೃತ್ಯ ನಡೆಸುವವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಲಾಯಿತು.