ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಗಿರಿ: ಇಂದಿನಿಂದ ಜಾನುವಾರ ಜಾತ್ರೆ

Last Updated 1 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಹೇಮಗಿರಿ ಬೆಟ್ಟದ ಮೇಲಿರುವ ಕಲ್ಯಾಣ  ವೆಂಕಟರಮಣ ಸ್ವಾಮಿಗೆ ಪ್ರತಿವರ್ಷ ರಥಸಪ್ತಮಿ ದಿನ ರಥೋತ್ಸವ ನಡೆಯುತ್ತದೆ. ಜೊತೆಗೆ ಇಲ್ಲಿನ  ಬಯಲಿನಲ್ಲಿ ನಡೆಯುವ ಜಾನುವಾರು ಜಾತ್ರೆಗೆ ರಾಜ್ಯದ ವಿವಿಧ ಭಾಗಳಿಂದ ರಾಸುಗಳು ಬರುತ್ತವೆ.

ಈ ಬಾರಿ ಜಾನುವಾರು ಜಾತ್ರೆಯು ಫೆ.2 ರಿಂದ ಆರಂಭಗೊಳ್ಳುತ್ತಿದ್ದು, ಈಗಾಗಲೇ ಜಾನುವಾರುಗಳು  ಜಾತ್ರೆ ಮಾಳಕ್ಕೆ ಬಂದು ಸೇರುತ್ತಿವೆ. ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರುವರಿಯಲ್ಲಿ ನಡೆಯುವ ಈ  ಜಾತ್ರೆಗೆ ನೆರೆಯ ಮೈಸೂರು, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜಾನುವಾಗಳು  ಬರುತ್ತಿವೆ. ರೂ 10 ಸಾವಿರದಿಂದ ರೂ. 2 ಲಕ್ಷ ಬೆಲೆ ಜಾನುವಾರು ಇರುತ್ತವೆ. ಉತ್ತಮ ರಾಸುಗಳಿಗೆ  ಬಹುಮಾನ ನೀಡಲಾಗುವುದು.

ಸೀಮೆಯವರು ಎಂದೇ ಗುರುತಿಸಿಕೊಂಡಿರುವ ಹಾವೇರಿ, ದಾವಣಗೆರೆ, ವಿಜಾಪುರ, ಹುಬ್ಬಳ್ಳಿ ಭಾಗಗಳ  ವ್ಯಾಪಾರಿಗಳು ರಾಸುಗಳನ್ನು ಖರೀದಿಸಲು ಬರುತ್ತಾರೆ.
ಹೇಮಾವತಿ ನದಿ ತಟದಲ್ಲಿ ನಡೆಯುವ ಗ್ರಾಮೀಣ ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಜಾತ್ರೆ  ಎಲ್ಲ ನಿಟ್ಟಿನಿಂದಲೂ ಜನರ ಮನಸ್ಸಿಗೆ ಮುದ ನೀಡುತ್ತದೆ. ಒಂದು ವಾರ ನಡೆಯುವ ಈ ಜಾತ್ರೆ ಸಂಭ್ರಮ  ರಥೋತ್ಸವದ ವೇಳೆಗೆ ಕಡಿಮೆಯಾದರೂ ಜನಗಳ ಜಾತ್ರೆ ತೆಪ್ಪೋತ್ಸವದವರೆಗೂ ಮುಂದುವರೆಯುತ್ತದೆ.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT