ಮೊಳಕಾಲ್ಮುರು: ತಾಲ್ಲೂಕಿನ ಮೊಗಲಹಳ್ಳಿಯಲ್ಲಿ ಭಾನುವಾರ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ವೈಭವವಾಗಿ ಆಚರಣೆ ಮಾಡಲಾಯಿತು.
ಸ್ಥಳೀಯ ರೆಡ್ಡಿ ಜನಾಂಗದ ನೇತೃತ್ವದಲ್ಲಿ ನಡೆದ ಈ ಜಯಂತಿಯನ್ನು ಪ್ರತಿವರ್ಷ ಮೇ 10ರಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮ ಪಂಚಾಯ್ತಿ ನೀತಿಸಂಹಿತೆ ಜಾರಿ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಜಯಂತಿಯನ್ನು ಮೆರವಣಿಗೆಗೆ ಮಾತ್ರ ಸೀಮಿತ ಮಾಡಲಾಯಿತು ಎಂದು ಆಯೋಜಕರು ತಿಳಿಸಿದರು.
ಜನಾಂಗದ ಮುಖಂಡರಾದ ಹನುಮಂತರೆಡ್ಡಿ, ಆರ್.ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ನಾರಾಯಣ ರೆಡ್ಡಿ, ಚಿದಾನಂದ ರೆಡ್ಡಿ ಇತರರು ನೇತೃತ್ವ ವಹಿಸಿದ್ದರು.