ಬುಧವಾರ, 8-2-1962
ಹೈಕಮಾಂಡ್ ಆದೇಶದಉಲ್ಲಂಘನೆ ಪ್ರಸಂಗ?
ಬೆಂಗಳೂರು, ಫೆ. 7 - ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಹೈಕಮಾಂಡಿನ ಆದೇಶದಂತೆ ನಡೆದುಕೊಂಡಿಲ್ಲವೆಂದು ಹೇಳಬಹುದಾದ ಕುತೂಹಲಕಾರಿ ಪರಿಸ್ಥಿತಿಯೊಂದು ಚಿಂತಾಮಣಿ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಉಮೇದುವಾರರನ್ನು ಆರಿಸುವ ಸಂಬಂಧದಲ್ಲಿ ಉದ್ಭವಿಸಿದೆ.
ಹಾಸನದಲ್ಲಿ ಕೈಗಾರಿಕೆತರಬೇತಿ ಸಂಸ್ಥೆ
ಬೆಂಗಳೂರು, ಫೆ. 7 - ಈ ವರ್ಷ ಹಾಸನದಲ್ಲಿ ಒಂದು ಕೈಗಾರಿಕಾ ತರಬೇತಿ ಸಂಸ್ಥೆಯ ಸ್ಥಾಪನೆಗೆ ರಾಜ್ಯ ಸರ್ಕಾರವು ಮಂಜೂರಾತಿಯನ್ನಿತ್ತಿದೆ.
ವಿದ್ಯಾವಂತರಾದ ಯುವಕರಿಗೆ ವಿವಿಧ ಕೈಗಾರಿಕೆಗಳಲ್ಲಿ ತರಬೇತಿ ನೀಡಿ, ಅವರಿಗೆ ಉದ್ಯೋಗ ದೊರಕಿಸಿಕೊಳ್ಳಲು ನೆರವು ನೀಡುವ ಈ ಸಂಸ್ಥೆ ಸ್ಥಾಪನೆಗೆ ಸುಮಾರು 12 ಲಕ್ಷ ರೂಪಾಯಿಗಳ ವೆಚ್ಚ ತಗಲುವುದು.