ಮತದಾರರನ್ನು ಪ್ರತಿವಾದಿಯನ್ನಾಗಿಸಿ ಅವರ ಹಾಗೂ ಸರ್ಕಾರದ ವಿರುದ್ಧ ಹೆಚ್ಚುವರಿ ಆರೋಪ ಮಾಡಿ ಸಲ್ಲಿಸಲಾಗಿದ್ದ ಅರ್ಜಿ ಮತ್ತು ಪಕ್ಷದ ಸೇರ್ಪಡೆಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಿ ಸಲ್ಲಿಸಲಾದ ‘ತಿದ್ದುಪಡಿ ಅರ್ಜಿ’ಗಳನ್ನು ಪುರಸ್ಕರಿಸಿದ್ದ ಹೈಕೋರ್ಟ್ ಆದೇಶವನ್ನೂ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. (ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯಲ್ಲಿ ಒಂದು ಕಡೆ ‘ನಾವು ಎಂದಿಗೂ ಬಿಜೆಪಿ ತೊರೆದಿಲ್ಲ’ ಎಂದು ಬರೆಯಲಾಗಿತ್ತು. ಆದರೆ ಬಿಜೆಪಿ ತೊರೆದಿಲ್ಲ ಎಂದರೆ ಬಿಜೆಪಿ ಸೇರ್ಪಡೆಗೊಂಡಿದ್ದರು ಎಂಬುದು ಖಚಿತವಾಯಿತಲ್ಲ ಎಂದು ಸಿಎಂ ಪರ ವಕೀಲರು ವಿಚಾರಣೆ ವೇಳೆ ಆಕ್ಷೇಪಿಸಿದ್ದರು. ಈ ಹಿನ್ನೆಲೆಯಲ್ಲಿ ‘ನಾವು ಎಂದಿಗೂ ಬಿಜೆಪಿ ಸೇರಿಲ್ಲ’ ಎಂದು ತಿದ್ದುಪಡಿ ಮಾಡಿ ‘ತಿದ್ದುಪಡಿ ಅರ್ಜಿ’ ಸಲ್ಲಿಸಲಾಗಿತ್ತು).