ಮಂಗಳೂರು: `ಇದರಲ್ಲಿ ನನ್ನದೇನೂ ಕೈವಾಡ ಇಲ್ಲ. ಇಲ್ಲಿ ಸೋಲು- ಗೆಲುವಿನ ಪ್ರಶ್ನೆಯೂ ಬರುವುದಿಲ್ಲ. ಲೋಕಾಯುಕ್ತನಾಗಿ ನಾನು ನೀಡಿದ ಗಣಿ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡರೆ ಗೆಲುವು ಎಂದು ಹೇಳುತ್ತೇನೆ~ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಪ್ರತಿಕ್ರಿಯಿಸಿದರು.
ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಬಂಧಿಸಿದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ.
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿ ವರದಿಯಲ್ಲಿ ಅವರ ಹೆಸರಿದೆ. ವಿಚಾರಣೆ ನಡೆಯುತ್ತಿದೆ. ಕೋರ್ಟ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ಹೈಕೋರ್ಟ್ಗೆ ಹೋಗುವ ಅವಕಾಶ ಇದೆ ಎಂದರು.