ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ಕಾಡು ಪ್ರಾಣಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಸಾವನ್ನಪ್ಪಿ, ಸುಮಾರು 100 ಕುರಿಗಳು ಕಾಣೆಯಾದ ಘಟನೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.
ಹಿರಿಯೂರು ತಾಲ್ಲೂಕು ಮಾರಿಕಣಿವೆ ಸಮೀಪದ ದೊಡ್ಡಘಟ್ಟ ಗ್ರಾಮದ ಯಶೋದಮ್ಮ, ತಿಪ್ಪೇಶ್, ಶೇಖರಪ್ಪ ಮತ್ತು ಸೀನಪ್ಪ ಎಂಬುವವರು ಸುಮಾರು 2,500 ಕುರಿಗಳನ್ನು ಗುಡ್ಡದ ಸಾಂತೇನಹಳ್ಳಿಯ ಹೊಲವೊಂದರಲ್ಲಿ ಮಂದೆ ನಿಲ್ಲಿಸಿದ್ದರು.