ಎನಗೊಂದು ಪಕ್ಷ
ನಿನಗೊಂದು ಪಕ್ಷ
ಗಲ್ಲಿಗಲ್ಲಿಗೊಂದು ಪಕ್ಷಕಟ್ಟಿ
ಜನರನೆತ್ತಾಳ ಬಲ್ಲರು
ಇದು ಎಷ್ಟು ಸತ್ಯ ಸುಳ್ಳೇಶ್ವರಾ.....
ಕುರ್ಚಿಗಾಗಿ ಪೂಜೆ ಮಾಡಿ
ಹೊಸ ಪಕ್ಷ ಕಟ್ಟಿ ನೋಡಿ
ಮೊಸಳೆ ಕಣ್ಣೀರು ಸುರಿಸಿ ಸುರಿಸಿ
ಒಳ್ಳೆ ಅಧಿಕಾರ ನೀಡುತ್ತೇವೆಂದು
ಜನರನ್ನ ನಂಬಿಸಿದ್ದಾರೆ ?
ಇದು ಸತ್ಯಾನಾ ಸುಳ್ಳೇಶ್ವರಾ.....
ಮಲ್ಲಮ್ಮ ಯಾಟಗಲ್, ದೇವದುರ್ಗ