ಕನ್ನಡದ ಸೃಜನಶೀಲತೆ ಇಡಿಯಾಗಿ ಪಡೆದು ಸಮುದಾಯದ ಧ್ವನಿಯನ್ನು ಸಮುದಾಯದ ಜೊತೆ ಹಂಚಿಕೊಳ್ಳುವ ಶಕ್ತಿ ಹೊಂದಿದ್ದ ಬಿ.ಎಚ್.ಶ್ರೀಧರರಂತಹ ಅನೇಕ ಹಿರಿಯ ಬರಹಗಾರರಿಂದ ಕನ್ನಡ ಸಾಹಿತ್ಯ ಸಮುದಾಯದ ಕೂಸಾಗಿಯೇ ಉಳಿದುಕೊಂಡು ಬಂದಿದೆ. ಹೀಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದು ಅಭಿಮಾನ ಮೂಡಿಸಿದೆ' ಎಂದು ಅವರು ಹೇಳಿದರು.
`ಇಂದು ಅನೇಕ ವೈಚಾರಿಕ, ಸೂಕ್ಷ್ಮ ಸಂವೇದನೆಯ ಬರಹಗಳು ಹೊರಬಂದರೂ ಹಿಂದಿನ ಹಿರಿಯ ಬರಹಗಾರರ ಸಾಮರ್ಥ್ಯದಂತೆ ಸಮುದಾಯದ ಹಂಚುವಿಕೆ ಆಗುತ್ತಿಲ್ಲವೆಂಬ ವಿಷಾದವೂ ಇದೆ. ಇನ್ನೊಂದೆಡೆ ಇವನ್ನು ಸಾಧಿಸಲು ಸಾಧ್ಯವಾ ಎಂಬ ಮರು ಹಂಬಲವೂ ಇದೆ' ಎಂದರು.
ವಿಮರ್ಶಕರಾದ ಪ್ರೊ. ಎಂ.ಜಿ.ಹೆಗಡೆ, ಆರ್.ಡಿ.ಹೆಗಡೆ ಆಲ್ಮನೆ, ನಿವೃತ್ತ ಪ್ರಾಧ್ಯಾಪಕ ಎಂ.ರಮೇಶ, ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಖಾ ಹೆಬ್ಬಾರ ಸ್ವಾಗತಿಸಿದರು. ಸಿ.ಎನ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.