ಬಸವನಬಾಗೇವಾಡಿ: ಮಡಿಕೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಖಂಡ ಕರ್ನಾಟಕದ ಕನಸು ನನಸಾಗಿಸುವ ಕಾರ್ಯವನ್ನು ಸಮ್ಮೇಳನದ ಸರ್ವಾ ಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ನಾ. ಡಿಸೋಜಾ ಅವರು ಮಾಡಬೇಕು ಎಂದು ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಮನವಿ ಮಾಡಿದ್ದಾರೆ.
ಈಗಾಗಲೇ ರಾಜ್ಯದೆಲ್ಲೆಡೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನದಲ್ಲಾದ ನಿರ್ಣಯಗಳು ಬಹುತೇಕ ಜಾರಿಗೆ ಬಂದಿಲ್ಲ. ಇದರಿಂದಾಗಿ ಮಡಿಕೇರಿ ಸಾಹಿತ್ಯ ಸಮ್ಮೇಳ ನದಲ್ಲಿ ಯಾವ ನಿರ್ಣಯಗಳು ಪಾಸು ಮಾಡುವುದು ಬೇಡ. ಕನ್ನಡಿಗರಿಗೆ ಉದ್ಯೋಗ ಸಿಗುವ ವರದಿಗಳು ದೂಳು ತಿನ್ನುತ್ತಿವೆ. ಕರ್ನಾಟಕ ಅಖಂಡ ವಾದರೂ ಹೈದರಾಬಾದ- ಕರ್ನಾಟಕ, ಮುಂಬೈ- ಕರ್ನಾಟಕ ಪದ ಬಳಕೆ ಜೋರಾಗಿಯೇ ನಡೆಯುತ್ತಿದೆ. ಮಾಯವಾಗುತ್ತಿರುವ ಕನ್ನಡ ಅಂಕಿ ಬಳಕೆ ಮಾಡುವತ್ತ ಗಮನ ಹರಿಸ ಬೇಕಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇದು ಮಾತೃಭಾಷೆ ಕಲಿಕೆ ಕಡ್ಡಾಯ ಎಂಬ ಮಾತಿಗೆ ವಿರೋಧ ವಾದಂತಾ ಗಿದೆ. ಕರ್ನಾಟಕದಲ್ಲಿ ಯಾವುದೇ ಭೀತಿ ಯಿಲ್ಲದೆ ನೆರೆ ರಾಜ್ಯದ ತಮಿಳು, ತೆಲಗು ಚಲನಚಿತ್ರಗಳು ಪ್ರದರ್ಶನ ವಾಗುತ್ತಿವೆ.