ಅರ್ಥಪೂರ್ಣವಾದ ಜನ ಪದ ಗೀತೆಗಳು ಜೀವನ ಪಾಠವನ್ನು ಕಲಿ ಸಿವೆ’ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಮಾರೇಗೌಡ ಮಾತನಾಡಿ, ‘ಕಾಲ ಬದಲಾದಂತೆ ಸಾಹಿತ್ಯವೂ ಬದಲಾಗು ತ್ತಿದೆ. ಇತ್ತೀಚಿನ ದಿನಗಳಲ್ಲಿ ಅರ್ಥ ವಿಲ್ಲದ, ಅಶ್ಲೀಲದಿಂದ ಕೂಡಿದ ಸಿನಿಮಾ ಹಾಡುಗಳು ರಚನೆಯಾಗುತ್ತಿವೆ. ಇದ ರಿಂದಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿ ಸುವ ಜನಪದ ಹಾಡುಗಳು ಕಣ್ಮರೆ ಯಾಗುತ್ತಿವೆ’ ಎಂದು ವಿಷಾದಿಸಿದರು.
ಮುಖ್ಯಶಿಕ್ಷಕ ಸಿ.ಪುಟ್ಟಸ್ವಾಮಿ ಮಾತ ನಾಡಿ, ‘ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ವಿಕಾಸ ಕೇವಲ ಪಠ್ಯವಸ್ತುಗಳ ಬೋಧನೆ ಯೊಂದರಿಂದಲೇ ಸಾಧ್ಯವಿಲ್ಲ. ಅವರಿಗೆ ನಾಡಿನ ಶ್ರೇಷ್ಠ ಸಂಸ್ಕೃತಿಯ ವಿಚಾರಗ ಳನ್ನು ಪರಿಚಯಿಸಬೇಕು. ಅವರಲ್ಲಿರು ವ ಪ್ರತಿಭೆಯನ್ನು ಗುರುತಿಸಲು ಇಂತಹ ವೇದಿಕೆಗಳು ಅವಶ್ಯಕ’ ಎಂದರು. ರಾಣಿ ಅಪ್ಪಾಜಿಗೌಡ ಕಾರ್ಯಕ್ರಮದ ಉದ್ಘಾ ಟನೆ ನೆರವೇರಿ ಸಿದರು. ರಾಮ ದಾಸು ಸ್ವಾಗತಿಸಿ, ಶಿವಲಿಂಗಯ್ಯ ನಿರೂಪಿ ಸಿದರು. ಎಂದಯಾ ವಂದಿಸಿದರು.