ಇನ್ನೂ ಕೆಲವರು ತಮ್ಮ ಆತ್ಮ ಸಂತೋಷಕ್ಕಾಗಿ ಅಥವಾ ತಮ್ಮಂಥ ಕವಿಗಳಿಗೋಸ್ಕರ ಕವನ ರಚಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಡಿ.ಬಿ.ಢಂಗ ತಮ್ಮ ಕಾವ್ಯ ಪ್ರಕಾರವನ್ನು ಕಳೆದ ಸುಮಾರು ಮೂರು ದಶಕಗಳ ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದದ್ದು ವಿಶೇಷ’ ಎಂದರು.
ಕೃತಿ ಬಿಡುಗಡೆ ಮಾಡಿದ ಡಾ.ಬಸು ಬೇವಿನಗಿಡದ, ‘ಅರ್ಥ–ಅನರ್ಥ ಎಂದರೆ ಕೇವಲ ಶಬ್ದಾರ್ಥ ಮಾತ್ರವಲ್ಲದೇ ಬದುಕಿನ ಒಳ್ಳೆಯದು–ಕೆಟ್ಟದ್ದು, ಸತ್ಯ–ಅಸತ್ಯ, ಶಬ್ದ–ಅಶಬ್ದ ಹೀಗೆ ಅನೇಕ ರೀತಿಯ ಅರ್ಥಗಳನ್ನು ಡಿ.ಬಿ.ಢಂಗ ಅವರ ಕಾವ್ಯದಲ್ಲಿ ಕಲ್ಪಿಸುತ್ತಾ ಹೋಗಬಹುದು’ ಎಂದರು. ಪ್ರೊ.ಬಸವರಾಜ ಒಕ್ಕುಂದ ಕೃತಿ ಕುರಿತು ಮಾತನಾಡಿದರು. ಕವಿ ಡಿ.ಬಿ,ಢಂಗ ತಮ್ಮ ಅನಿಸಿಕೆ ಹಂಚಿಕೊಂಡರು. ಎಂ.ಎಂ.ಪುರದನಗೌಡರ ಸ್ವಾಗತಿಸಿದರು.