ಚನ್ನಪಟ್ಟಣ: ‘ಕುಷ್ಠರೋಗ ನಿರ್ಮೂ ಲನೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಕನಸು, ಅವರ ಕನಸನ್ನು ನನಸು ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯ’ ಎಂದು ವಿರೂಪಾಕ್ಷಿಪುರ ಗ್ರಾ. ಪಂ. ಅಧ್ಯಕ್ಷ ಆರ್.ಮಲವೇಗೌಡ ಅಭಿ ಪ್ರಾಯಪಟ್ಟರು. ತಾಲ್ಲೂಕಿನ ವಿರುಪಾಕ್ಷಿಪುರ ಗ್ರಾಮ ಪಂಚಾಯತಿ ಅವರಣದಲ್ಲಿ ಆರೋಗ್ಯ ಇಲಾಖೆಯ ಸರ್ಕಾರಿ ನಿರ್ದೇಶಿತ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿ ಜನಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಕುಷ್ಠರೋಗದ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ರೋಗವನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿದರೆ ಈ ರೋಗ ಇತರರಿಗೆ ಹರಡುವುದನ್ನು ತಪ್ಪಿಸಬಹುದು. ಇದಕ್ಕೆ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ’ ಎಂದರು. ಆರೋಗ್ಯ ಇಲಾಖೆಯ ಡಿ.ಪುಟ್ಟ ಸ್ವಾಮಿಗೌಡ ಮಾತನಾಡಿ, ‘ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ತಿಳಿ ಬಿಳಿ, ತಾಮ್ರ ಬಣ್ಣದ, ಮಾಸಲು ಬಣ್ಣದ, ರೋಮ ರಹಿತ, ಸ್ಪರ್ಶ ಜ್ಞಾನ ವಿಲ್ಲದ, ನೋವಿಲ್ಲದ, ನವೆ ಇಲ್ಲದ, ಮಚ್ಚೆಗಳು, ಕುಷ್ಠರೋಗದ ಪ್ರಾರಂಭಿಕ ಲಕ್ಷಣಗಳಾಗಿರಬಹುದು.