ಈ ಯೋಜನೆಗೆ ಸರ್ಕಾರವೂ ತುಟಿಯೆರಡು ಮಾಡದೇ ಸಹಕರಿಸಬೇಕು. ಹಾಗೇ, ಆ ಕೃತಿಗಳು ಸುಲಭ ಬೆಲೆಯಲ್ಲಿ ಶ್ರೀಮಾನ್ ಕನ್ನಡಿಗನಿಗೆ ದೊರಕುವಂತಾಗಬೇಕು. ಪರಿಷತ್ತು ಮತ್ತು ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ, ಖಾಸಗಿ ಪ್ರಕಾಶನ ಸಂಸ್ಥೆಗಳಾದರೂ ಈ ಹೊರೆ ಹೊತ್ತು ಮೌಲಿಕವಾದ ಕನ್ನಡ ಕಟ್ಟೋಣದ ಬರೀ ಮಾತಲ್ಲದ ಕನ್ನಡ ನೆತ್ತರಿನ ಈ ನುಡಿಗಳನ್ನು ಪ್ರಕಟಿಸಲು ಮುಂದಾದಲ್ಲಿ ಅವು ಕನ್ನಡ ಬದುಕಿರುವವರೆಗೂ ಕನ್ನಡದ ಭಗವದ್ಗೀತೆಯಾಗಿ ಉಳಿಯಬಲ್ಲವು. ಸಮ್ಮೇಳನದ ನಿರ್ಣಯಗಳನ್ನು ಈಗಾಗಲೇ ಬೆಂಗಳೂರಿನ ಸುಮುಖ ಪ್ರಕಾಶನ ಹೊರತಂದಿದ್ದು ಶ್ಲಾಘನೀಯವೂ ಹೌದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಲಿ ಎಂಬ ಕೂಗಿಗೆ ಮನ್ನಣೆ ಸಿಗಬಹುದೇ..?
-–ವಿಜಯಕಾಂತ ಪಾಟೀಲ, ಕ್ಯಾಸನೂರು, (ಹಾನಗಲ್)