ಸವದತ್ತಿ: ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಗಣೇಶೋತ್ಸವ ಸಮಾರಂಭವನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಶಾಂತಿಯುತವಾಗಿ ಸಂಭ್ರಮದಿಂದ ಆಚರಿಸುವುದು ನಮ್ಮೆಲ್ಲರ ಆದ್ಯ ಕತರ್ವ್ಯವಾಗಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
ಬುಧುವಾರ ತಾಲೂ್ಲಕು ಆಡಳಿತ ಆಯೋಜಿಸಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ಬಹುಮಾನ ವಿತರಣಾ ಸಮಾರಂ ಭದಲಿ್ಲ ಮಾತನಾಡಿದ ಅವರು, ಎಲ್ಲ ಕಾರ್ಯಗಳಿಗೆ ಮುನ್ನ ಗಣೇಶನನ್ನು ಪ್ರಥಮವಾಗಿ ಆರಾಧಿಸುವ ನಾವು ಆತನ ಆಚರಣೆ ವಿಧಿವತ್ತಾಗಿ ಆಚರಿಸುವ ಮೂಲಕ, ಭಾವಗಳ ಸಾಮರಸ್ಯ ಸಾರಬೇಕಾಗಿದೆ ಎಂದರು.
ವಕೀಲ ಬಿ.ವಿ. ಮಲಗೌಡರ ಮಾತನಾಡಿ ಸತತ ಬರಗಾಲದಿಂದ ತತ್ತರಿಸುತ್ತಿರುವ ಸವದತ್ತಿಯಲ್ಲಿ ಅದೂ್ದರಿ ಗಣೆಶೋತ್ಸವ ನಡೆದಿದೆ. ಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಸಮೃದ್ಧಿಯ ನಾಡಾಗಲಿ ಎಂದರು.
ಮೂಲಿಮಠದ ಮಲಿ್ಲಕಾರ್ಜುನ ಸಾ್ವಮೀಜಿ ಮಾತನಾಡುತ್ತ, ಆಚರಣೆಗಳನ್ನು ಅನುಕರಣೆಯಾಗದೆ. ಅದರ ಕುರಿತು ಅರಿತುಕೊಂಡು ಆಚರಿಸಿದಾಗ ಅರ್ಥ ಬರುವುದು.
ನಾಡಿನಲಿ್ಲ ಮಣ್ಣಿನ ಆರಾಧನೆಯೊಂದಿಗೆ, ಎಲ್ಲ ವರ್ಗದ ಆರಾಧಕನಾದ ಗಣಪತಿ
ಉತ್ಸವದ ಸಡಗರ ಅತ್ಯಂತ ಶ್ರೀಮಂತವಾಗಿದೆ ಎಂದರು. ಪುರಸಭೆ ಉಪಾಧ್ಯಕ್ಷ ಸುಭಾಸ ರಜಪೂತ, ಎಂ.ಟಿ ಶಿಗಿ್ಲ, ಮನೋಹರ ಶೆಟ್ಟರ್, ಶಿವಾನಂದ ಹೂಗಾರ, ಪಿ.ಎಸ್ ಐ ನಿಂಗನಗೌಡ
ಪಾಟೀಲ, ರಾಜು ಬದಾಮಿ ಮುಂತಾದವರು ಹಾಜರಿದ್ದರು.
ಶಿವಾ ಗೆಳಯರ ಬಳಗ ಪ್ರಥಮ: ಗಣಪತಿ ಮೂರ್ತಿ ಪ್ರತಿಷಾ್ಠಪಿಸಿ ನಿತ್ಯ ಆರಾಧನೆಯೊಂದಿಗೆ ಆಚರಸಿದ ಗಣೇಶ ಉತ್ಸವದ ಕೊನೆಯ ದಿನವಾದ ಬುಧವಾರ ಇಡೀ ನಗರದಲಿ್ಲ ಸಡಗರದ ಸಂಭ್ರಮದ ವಾತಾವರಣ ಇತು್ತ. ಉತ್ಸವದ ಅಂಗವಾಗಿ ತಾಲೂ್ಲಕು ಆಡಳಿತದಿಂದ ಕೊಡಮಾಡುವ ಬಹುಮಾನವನ್ನು ವಿತರಿಸಲಾಯಿತು.
ಪ್ರಥಮ ಬಹುಮಾನ ಗುರ್ಲಹೊಸೂರಿನ ಶಿವಾ ಗೆಳೆಯರ ಬಳಗ, ಗಜಾನನ ಯುವಕ ಮಂಡಳ (ದಿ್ವತೀಯ)ಕೆ್ಕ ಬಹುಮಾನ ವಿತರಿಸಲಾಯಿತು