ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶ ವಿಭಜನೆಗೆ ಅವಕಾಶ ನೀಡಬೇಡಿ’

Last Updated 7 ಜನವರಿ 2014, 6:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಒಗ್ಗಟ್ಟಿನ ಕೊರತೆ ಮತ್ತು ಉದಾಸೀನ ಭಾವದಿಂದಾಗಿ ದೇಶದ ಕೆಲವು ಭಾಗಗಳನ್ನು ಕಳೆದುಕೊಂಡ ನಾವು ಮತ್ತೊಮ್ಮೆ ಇಂಥ ಪ್ರಸಂಗ ಎದು­ರಾಗಲು ಬಿಡಬಾರದು’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಂತರ­ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ ಚಂಪಕರಾಯಿ ಹೇಳಿದರು.

ವಿಎಚ್‌ಪಿ ಸ್ವರ್ಣ ಜಯಂತಿ ಅಂಗ­ವಾಗಿ ನಗರದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತ­ನಾಡಿದ ಅವರು ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಂದ ದೇಶ ವಿಭ­ಜನೆ ಆಗ­ದಂತೆ ಎಲ್ಲರೂ ಕಾಳಜಿ ವಹಿಸ­ಬೇಕಾ­ಗಿದೆ ಎಂದರು. ‘ನಾವೆಲ್ಲರೂ ಭಾರತೀ­ಯರು.

ನಮ್ಮಲ್ಲಿ ಭೇದ ಇರಬಾರದು. ಭೇದ ಭಾವ ಮೂಡಿದರೆ ಹೊರಗಿನ ಶಕ್ತಿ­ಗಳಿಗೆ ದೇಶದ ಮೇಲೆ ಆಕ್ರಮಣ ಮಾಡಲು ದಾರಿಮಾಡಿಕೊಟ್ಟಂತಾ­ಗುತ್ತದೆ’ ಎಂದು ಹೇಳಿದ ಚಂಪಕ­ರಾಯಿ ‘ಭ್ರಷ್ಟಾಚಾರ ದೇಶಕ್ಕೆ ಅಂಟಿದ ದೊಡ್ಡ ಶಾಪ. ಬೇರೆಯವರ ಹಣ ಮತ್ತು ಸಂಪತ್ತನ್ನು ನಗಣ್ಯ ಮಾಡುವ ಪ್ರವೃತ್ತಿ ಬೆಳೆಯಬೇಕಾಗಿದೆ’ ಎಂದರು.

‘ಅಯೋಧ್ಯೆ­ಯಲ್ಲಿ ರಾಮ­ಜನ್ಮ­ಭೂಮಿ­ಯನ್ನು ಉಳಿಸಲು ವಿಶ್ವಹಿಂದೂ ಪರಿಷತ್‌ ದೊಡ್ಡ ಹೋರಾಟವನ್ನೇ ಹಮ್ಮಿ­ಕೊಂಡು ಯಶಸ್ವಿಯಾಗಿದೆ. ಆದರೆ ಈಗ ಪೂರ್ಣ ಅಯೋಧ್ಯೆ ಹಿಂದೂ­ಗಳಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿದಿದೆ. ಅಯೋಧ್ಯೆ ವಿಷಯದಲ್ಲಿ ಸಮಸ್ತ ಭಾರ­ತೀ­­ಯರು ಒಂದಾಗಬೇಕಾಗಿದೆ’ ಎಂದು ಅವರು ಸಲಹೆ ನೀಡಿದರು.

‘ರಾಜ್ಯಭಾರ ಮಾಡುವುದು ರಾಜರ ಕೆಲಸ. ಅವರಿಗೆ ತೆರಿಗೆಯನ್ನು ನೀಡು­ವುದು ಜನರ ಕರ್ತವ್ಯ. ಆದರೆ ಇಸ್ಲಾಂ ಆಡಳಿತಗಾರರು ಭಾರತದಲ್ಲಿ ಸಾವಿ­ರಾರು ಹಿಂದೂ ದೇವಾಲಯ­ಗಳನ್ನು ಕೆಡವಿದ್ದಾರೆ. ಇದರ ಹಿಂದಿರುವ ಉದ್ದೇಶವೇನೆಂದು ಅರ್ಥ­ವಾಗುತ್ತಿಲ್ಲ. ಬಾಬರ್‌ ಅಯೋಧ್ಯೆಯಲ್ಲಿ ರಾಮ­ಮಂದಿ­ರ­­ವನ್ನು ಕೆಡವಿದ ವಿಷಯ ವೈಜ್ಞಾ­ನಿಕವಾಗಿ ದೃಢಪಟ್ಟಿದೆ. ಇಲ್ಲಿ ಕೊನೆಗೂ ಹಿಂದೂಗಳಿಗೆ ಜಯ ಸಿಕ್ಕಿದೆ’ ಎಂದು ಅವರು ಹೇಳಿದರು.

ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷ ರೇವಣ­ಸಿದ್ದಪ್ಪ, ನಗರ ಅಧ್ಯಕ್ಷ ಹಿತೇಶ ಮೋದಿ, ಸಹ ಕಾರ್ಯದರ್ಶಿ ಶಿವಯ್ಯ ಹಿರೇಮಠ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT