ಭುವನೇಶ್ವರ(ಪಿಟಿಐ): ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ತಮ್ಮ ಹೆಸರಿನ ಹಿಂದೆ ತಾವು ಪಡೆದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಉಲ್ಲೇಖಿಸುತ್ತಿರುವುದು ಸರಿಯಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಒಡಿಶಾದ ಸುಂದರಗಡ ಲೋಕಸಭೆ ಕ್ಷೇತ್ರದ ಬಿಜೆಡಿ ಅಭ್ಯರ್ಥಿ, ಮಾಜಿ ಹಾಕಿ ಪಟು ದಿಲೀಪ್ ಟರ್ಕಿ ಅವರು ‘ಪದ್ಮಶ್ರೀ’ ಬಳಸುತ್ತಿರುವುದಕ್ಕೆ ಆಯೋಗ ಮೇಲಿನಂತೆ ಹೇಳಿದೆ.
‘ಪೋಸ್ಟರ್, ಬ್ಯಾನರ್, ಕರಪತ್ರ ಮತ್ತು ಫ್ಲೆಕ್ಸ್ಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಉಲ್ಲೇಖಿಸುವುದು ಸರಿಯಲ್ಲ. ಒಂದು ರೀತಿಯಿಂದ ಇದು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದಂತಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಟರ್ಕಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.