ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಂಧವ್ಯ ಉಳಿಸಿಕೊಳ್ಳುವುದರಲ್ಲಿಯೇ ಹಿರಿತನ’

Last Updated 22 ಸೆಪ್ಟೆಂಬರ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲೆನಾಡಿನ ಜತೆಗೆ ಬೆಸೆದ ಬಾಂಧವ್ಯವನ್ನು ಕೊನೆಯವರೆಗೂ ಉಳಿಸಿಕೊಂಡು ಬರುವುದರಲ್ಲಿ ಹಿರಿತನವಿದೆ’ ಎಂದು ಮಾಜಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಲೆನಾಡು ಮಿತ್ರವೃಂದವು ನಗರದಲ್ಲಿ ಭಾನುವಾರ ಆಯೋಜಿಸಿದ್ದ 5ನೇ ವಾರ್ಷಿಕೋತ್ಸವ ಹಾಗೂ ‘ಮಲೆನಾಡು ಮಿತ್ರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಮಲೆನಾಡಿನ ಅನೇಕ ಜನರು ವಾಸವಾಗಿದ್ದಾರೆ. ಇಲ್ಲಿ ಬಂದು ಅವರ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಅವರ ಪೋಷಕರು ತಮ್ಮ ಮಲೆನಾಡು ಬಿಟ್ಟು ಬರದೆ, ಇವರು ಅಲ್ಲಿಗೆ ಹೋಗಲಾಗದೆ, ಬದುಕು ಮತ್ತು ಸಂಬಂಧಗಳು ಇಂದು ಅತಂತ್ರವಾಗುತ್ತಿವೆ’ ಎಂದರು.

‘ಮಲೆನಾಡಿನ ಬದುಕು ಲಾಟರಿ  ಉದ್ಯಮ ಇದ್ದ ಹಾಗೆ. ಅಡಿಕೆಗೆ ಬೆಲೆ ಬಂದರೆ ಮಾತ್ರ ಅಲ್ಲಿನ ರೈತರ ಬದುಕು ಹಸನಾಗುತ್ತದೆ. ಈ ವರ್ಷ ಬೆಳೆ ಬಂದಿತ್ತು. ಬೆಲೆಯೂ ಇತ್ತು. ಆದರೆ, ಮೂರು ತಿಂಗಳಿನ ಸತತ ಮಳೆಯಿಂದ ಬೆಳೆಯೆಲ್ಲವೂ ನಾಶವಾಗಿದೆ’ ಎಂದರು.

ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಮಾತನಾಡಿ, ‘ಮಲೆನಾಡು ಮಿತ್ರ ವೃಂದ’ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT