ದಾವಣಗೆರೆ: ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ದರ ನಿಗದಿ ಮಾಡುವುದು ಸೇರಿದಂತೆ ಕೃಷಿ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಬೆಳೆ ಆಯೋಗ’ ರಚನೆಗೆ ನಿರ್ಧರಿಸಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಶುಕ್ರವಾರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ಅಂತ್ಯದಲ್ಲಿ ಬೆಳೆ ಆಯೋಗ ರಚಿಸುವ ಮೂಲಕ ಕಾರ್ಯಸೂಚಿಯ ಸ್ಪಷ್ಟ ರೂಪುರೇಷೆ ನೀಡಲಾಗುವುದು.