ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇಡ ಜಂಗಮರು ಸಂಘಟಿತರಾಗಲಿ’

ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶ
Last Updated 6 ಡಿಸೆಂಬರ್ 2013, 10:50 IST
ಅಕ್ಷರ ಗಾತ್ರ

ಜಾವಗಲ್‌: ‘ಬೇಡ ಜಂಗಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅಗತ್ಯ’ ಎಂದು ಅರಸೀಕೆರೆ ತಾಲ್ಲೂಕು ಬೇಡ ಜಂಗಮ ಸಮಾಜ ಅಧ್ಯಕ್ಷ ಕಲ್ಲಸಾದರಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಜಾವಗಲ್‌ ಸಮೀಪದ ಮಾವುತನಹಳ್ಳಿಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಬೇಡ ಜಂಗಮರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ತಾಲ್ಲೂಕು ಕಾರ್ಯದರ್ಶಿ ತರುಣದೇವ್‌, ಗೌರವಾಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಸಿದ್ದಯ್ಯ ಮಾತನಾಡಿದರು.

ಪದಾಧಿಕಾರಿಗಳ ನೇಮಕ: ಜಾವಗಲ್‌ ಹೋಬಳಿ ಬೇಡ ಜಂಗಮ ಸಮಾಜ ಸಂಘವನ್ನು ರಚಿಸಲಾಯಿತು. ಮೂಡನಹಳ್ಳಿ ಮರುಳಸಿದ್ದಯ್ಯ (ಗೌರವಾಧ್ಯಕ್ಷ), ಜಾವಗಲ್‌ ಲೋಕೇಶ್‌ (ಅಧ್ಯಕ್ಷ), ಕುರಾದಹಳ್ಳಿ ಗುರುಸ್ವಾಮಿ (ಕಾರ್ಯದರ್ಶಿ), ಕುಮಾರಸ್ವಾಮಿ (ಉಪಾಧ್ಯಕ್ಷ), ರಘು (ಪ್ರಧಾನ ಕಾರ್ಯದರ್ಶಿ), ರುದ್ರೇಶ್ (ಸಹಕಾರ್ಯದರ್ಶಿ), ಶಿವ ಮೂರ್ತಿ, ಪಂಚಾಕ್ಷರಯ್ಯ (ವಕ್ತಾರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT