ನವದೆಹಲಿಯಲ್ಲಿ ನಡೆಯುತ್ತಿರುವ ‘ಭಾರತೀಯ ಪ್ರವಾಸಿ ದಿವಸ್–2014’ ಕಾರ್ಯಕ್ರಮದಲ್ಲಿ ಬುಧವಾರ ಭಾಗವಹಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ‘ಮರುಕಳಿಸಿದ ಅದ್ಭುತ ಅವಕಾಶಗಳು’ ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಕೇಂದ್ರ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಮತ್ತು ಮಲೇಷ್ಯಾದ ಪರಿಸರ ಖಾತೆ ಸಚಿವ ದಾತುಕ್ ಸೆರಿ ಜಿ. ಪಲನಿವೆ ಇದ್ದರು.