ಬೆಂಗಳೂರು: ಖುಷ್ಕಿ ಪ್ರದೇಶಗಳ ಬೆಳೆ ಇಳುವರಿ ಹೆಚ್ಚಿಸುವಲ್ಲಿ ರಾಜ್ಯ ಸರ್ಕಾರ ‘ಭೂಚೇತನ’ ಯೋಜನೆಯಡಿ ತೋರಿದ ಸಾಧನೆಗೆ ‘ಮಹೋನ್ನತ ಸಾಧನೆ’ ಪ್ರಶಸ್ತಿ ದೊರೆತಿದೆ.
ಹೈದರಾಬಾದ್ನ ಇಕ್ರಿಸ್ಯಾಟ್ ಸಂಸ್ಥೆಯಲ್ಲಿ ಇದೇ 9ರಂದು ನಡೆದ ಸಮಾರಂಭದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ ಪ್ರಶಸ್ತಿ ಸ್ವೀಕರಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ ಹಾಜರಿದ್ದರು. ಭೂಚೇತನ ಯೋಜನೆ 2009–10ರಲ್ಲಿ ಜಾರಿಗೆ ಬಂದಿದೆ.