ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಪ್ರಣಾಳಿಕೆಗೂ ಸಾಹಿತ್ಯಕ್ಕೂ ವ್ಯತ್ಯಾಸವಿದೆ’

ಸಾಹಿತಿ ವಿವೇಕ ರೈ ಮಾರ್ಮಿಕ ನುಡಿ
Last Updated 14 ಡಿಸೆಂಬರ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕೀಯ ಪ್ರಣಾಳಿಕೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವಿದೆ. ಇದನ್ನು ಸಾಹಿತಿಗಳು ಕಂಡುಕೊಳ್ಳಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.

ಅಭಿನವ ಹಾಗೂ ಪಲ್ಲವ ಪ್ರಕಾ­ಶನವು ನಗರದ ಕನ್ನಡ ಭವನದ ನಾಟಕ ಅಕಾಡೆಮಿಯ ಚಾವಡಿ ಸಭಾಂಗಣ­ದಲ್ಲಿ ಶನಿವಾರ ಆಯೋಜಿ­ಸಿದ್ದ ಅವ­ರದೇ ಕೃತಿಗಳಾದ ‘ಅರಿವು ಸಾಮಾ­ನ್ಯವೆ’, ‘ನೆತ್ತರ ಮದುವೆ’, ‘ಇರುಳ ಕಣ್ಣು’ ಕೃತಿಗಳ ಬಿಡುಗಡೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.

‘ರಾಜಕೀಯದ ಪ್ರಣಾಳಿಕೆಗಳಿಗೂ ಹಾಗೂ ಸಾಹಿತ್ಯದ ಆಲೋಚನೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇದರಿಂದ ಸಾಹಿತ್ಯ ಮತ್ತು ರಾಜಕೀಯವನ್ನು ಒಂದು ಅಂತರವಿಟ್ಟುಕೊಂಡೇ ನೋಡ­ಬೇಕು. ಸಾಹಿತಿಗಳು ರಾಜಕೀಯ ಪ್ರಣಾಳಿಕೆಯ ದಾಸರಾಗಬಾರದು’ ಎಂದು ನುಡಿದರು.

‘ಎಲ್ಲರೊಂದಿಗೆ ಸ್ನೇಹಿತರಂತೆ ಇರ­ಬೇಕು. ಯಾರೊಂದಿಗೂ ದ್ವೇಷವನ್ನು ಸಾಧಿಸುವುದು ಸರಿಯಲ್ಲ. ನಮ್ಮ ನಿರ್ಧಾರಗಳ ಬಗ್ಗೆ ಖಚಿತತೆ ಇರಬೇಕು’ ಎಂದು ಹೇಳಿದರು.

‘ನನ್ನ ಬರವಣಿಗೆಯಿಂದ ಕೆಲವರು ನನ್ನನ್ನು ಎಡ ಪಂಥೀಯನೆಂದು ಗುರುತಿ­ಸುತ್ತಾರೆ. ಆದರೆ. ನನಗೆ ನನ್ನ ಬರವಣಿಗೆ ಬಗೆಗೆ ಖಚಿತತೆಯಿದೆ’ ಎಂದು ಪ್ರತಿಪಾದಿಸಿದರು.

‘ಎಲ್ಲಾ ನೋವುಗಳ ನಡುವೆ ನಮ್ಮನ್ನು ಕಾಪಾಡುವುದು ಬರವಣಿಗೆ. ನನ್ನ ಮುಂದಿನ ಜೀವನವನ್ನು ಬರವಣಿ­ಗೆಗಾಗಿ ಮೀಸಲಿಡುತ್ತೇನೆ’ ಎಂದರು

ವಿಮರ್ಶಕ ಪ್ರೊ.ಸಿ.ಎನ್‌.ರಾಮ­ಚಂದ್ರನ್‌, ‘ಅರಿವು ಸಾಮಾನ್ಯವೆ’ ಕೃತಿಯ ಕುರಿತು ಮಾತನಾಡಿ, ‘ಇತಿಹಾಸ- ಜನಪದದ ನಡುವಿನ ಭಿನ್ನತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ಸಂಸ್ಕೃತಿ, ಭಿನ್ನ ಸಾಹಿತ್ಯಗಳ ವಿದ್ವತ್ತು, ಭಿನ್ನ ವಿಚಾರಗಳು ಕೂಡುವ ತಾಣವಾಗಿದ್ದು, ಇದೊಂದು ವೈಚಾರಿಕ ಲೇಖನಗಳ ಸಂಕಲನವಾಗಿದೆ’ ಎಂದರು.

ಲೇಖಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಇರುಳ ಕಣ್ಣು’ ಕೃತಿಯಲ್ಲಿ ‘ಧಾರ್ಮಿಕ ಮೂಲಭೂತ­ವಾದದ ಬಗ್ಗೆ ವಿಸ್ತಾರತೆಯನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯದ ಕುರಿತಾದ ಒಂದು ಉತ್ತಮ ಕೈಪಿಡಿ­ಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT