ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜನಾಥ್‌ ಮನೆಗೆ ಮುತ್ತಿಗೆ’

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ‘ಲವ್‌ ಜಿಹಾದ್‌’ ಕುರಿತ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ವಿವಾದಿತ ಹೇಳಿಕೆಗೆ ಶುಕ್ರವಾರ ತಿರುಗೇಟು ನೀಡಿರುವ ಶ್ರೀರಾಮ ಸೇನೆ, ಲವ್‌ ಜಿಹಾದ್‌ ಪ್ರಕರಣಗಳ ತನಿಖೆಗೆ ಪ್ರತ್ಯೇಕವಾಗಿ ವಿಶೇಷ ದಳ ರಚಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.

‘ದೇಶದ ಗೃಹ ಸಚಿವರಿಗೆ ‘ಲವ್‌ ಜಿಹಾದ್‌’ ಬಗ್ಗೆ ಗೊತ್ತಿಲ್ಲದಿರುವುದು ನಾಚಿಕೆ­ಗೇಡು. ರಾಜನಾಥ್‌ ತಮ್ಮ ಹೇಳಿಕೆ­ಯನ್ನು ತಕ್ಷಣ ವಾಪಸ್‌ ಪಡೆ­ಯಲಿ.  ಇಲ್ಲದಿದ್ದರೆ ದೆಹಲಿ­ಯಲ್ಲಿ­ರುವ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಮೂಲಕ ‘ಲವ್‌ ಜಿಹಾದ್‌’ ಬಗ್ಗೆ ತಿಳಿಸಿಕೊಡುತ್ತೇವೆ’ ಎಂದು ಸಂಘಟನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಶುಕ್ರವಾರ ಇಲ್ಲಿ ಎಚ್ಚರಿಕೆ ನೀಡಿದ್ದಾರೆ.

ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನ ಬಿಜೆಪಿ ನಾಯಕರು ಹಿಂದೂ ಸಮುದಾಯದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರಿಂದ ದೂರ­ವಿರುವಂತೆ ತಾಕೀತು ಮಾಡಿರುವ ಕುರಿತು ಸೆ.12­ರಂದು ಸುದ್ದಿಗಾರರು ಪ್ರತಿಕ್ರಿಯೆ ಕೇಳಿ­ದಾಗ, ‘ಲವ್‌ ಜಿಹಾದ್‌ ಬಗ್ಗೆ ತಿಳಿಯದು’ ಎಂದು ರಾಜನಾಥ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT