ಸಿಂಗಪುರ (ಐಎಎನ್ಎಸ್): ಭಾರತೀಯರೇ ಹೆಚ್ಚಾಗಿರುವ ಇಲ್ಲಿನ ಲಿಟ್ಲ್ ಇಂಡಿಯಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಭಾರತೀಯನೊಬ್ಬ ಮೃತಪಟ್ಟ ಘಟನೆ ಖಂಡಿಸಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
40 ವರ್ಷದ ನಂತರ ಇಷ್ಟು ತೀವ್ರತೆಯ ಘಟನೆ ನಡೆದಿದ್ದು ಎರಡನೇ ಬಾರಿ ಎನ್ನಲಾಗಿದೆ. ಖಾಸಗಿ ಬಸ್ ಡಿಕ್ಕಿ ಹೊಡೆದು ಶಕ್ತಿವೇಲ್ ಎಂಬ ವ್ಯಕ್ತಿ ಭಾನುವಾರ ಮೃತಪಟ್ಟಿದ್ದರು.
ಶಾಪಿಂಗ್ ಮಳಿಗೆ ಇರುವ ಟೆಕ್ಕಾ ಕೇಂದ್ರದ ಬಳಿ ಅಪಘಾತ ಸಂಭವಿಸಿರುವುದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾಯಿತು. ಘಟನೆ ವೇಳೆ ಪ್ರತಿಭಟನಾಕಾರರು ಆಂಬುಲೆನ್ಸ್ಗೆ ಬೆಂಕಿ ಹಚ್ಚಿದ್ದು, ಪೊಲೀಸ್ ವಾಹನ ಹಾಗೂ ಅನೇಕ ಖಾಸಗಿ ವಾಹನಗಳನ್ನು ಜಖಂಗೊಳಿಸಿದ್ದಾರೆ.
27 ಜನ ಬಂಧನ: ಗಲಭೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸೇರಿದಂತೆ 18 ಮಂದಿ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ 27ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.