ಬೆಂಗಳೂರು: ‘ಇಂದಿನ ಯುವಜನಾಂಗ ವಿವೇಕಾನಂದರಂತೆ ವಿಚಾರಶೀಲರಾಗಬೇಕು’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಜನತಾ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 150 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯಾವ ವ್ಯಕ್ತಿ ಹುಟ್ಟಿನಿಂದ ಗುರುವಿನ ಕಂದನಾಗುತ್ತಾನೋ ಅವನು ವಿವೇಕಾನಂದರಂತಾಗುತ್ತಾನೆ. ಹುಟ್ಟಿನಿಂದ ತಂದೆ–ತಾಯಿಗಳ ಕಂದನಾಗದೆ, ಗುರುವಿನ ಕಂದನಾಗಿದ್ದರಿಂದ ಅವರು ಸ್ವಾಮಿ ವಿವೇಕಾನಂದರಾಗಲು ಸಾಧ್ಯವಾಯಿತು’ ಎಂದರು.