‘ರೋಗಿಯ ಆರೋಗ್ಯ ಸರಿಯಿಲ್ಲ ಎಂದು ಆತನನ್ನು ಹೋಳು ಮಾಡಲು ಸಾಧ್ಯವೇ? ಹೋಳು ಮಾಡಿದರೂ ಆತನ ಆರೋಗ್ಯ ಸುಧಾರಿಸುವುದೇ? ಹಾಗಾಗಿ ಪಾಲಿಕೆಯನ್ನು ಹೋಳು ಮಾಡುವ ಉದ್ದೇಶ ನಮ್ಮದಲ್ಲ. ಪುನರ್ರಚನೆಯ ದೃಷ್ಟಿ ಕೋನದಿಂದ ಅಧ್ಯಯನಕ್ಕೆ ಮುಂದಾಗಿದ್ದೇವೆ’ ಎಂದರು.
ಪಾಲಿಕೆಯ ಎಂಟು ವಲಯಗಳ ಸ್ವರೂಪ ಅವೈಜ್ಞಾನಿಕವಾಗಿದೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಕೇವಲ ಒಂದು ವಿಧಾನಸಭಾ ಕ್ಷೇತ್ರವಿದೆ. ಆದರೆ, ಇನ್ನುಳಿದ ಏಳು ವಲಯಗಳ ವ್ಯಾಪ್ತಿಯಲ್ಲಿ 27 ವಿಧಾನಸಭಾ ಕ್ಷೇತ್ರಗಳಿವೆ. ಹಾಗಾಗಿಯೇ ಪುನರ್ರಚನೆ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
‘ವರದಿಯಲ್ಲಿ ಯಾವುದೇ ಕಥೆ ಇರುವುದಿಲ್ಲ. ಬದಲಾಗಿ ಅಂಕಿ ಅಂಶಗಳು, ದಾಖಲೆಗಳು, ಬೇರೆ ಬೇರೆ ದೇಶಗಳ ಉದಾಹರಣೆ ಸೇರಿದಂತೆ ಯಶಸ್ವಿ ಆಡಳಿತ ನಡೆಸಲು ಪೂರಕವಾಗಿರುವ ಅಂಶಗಳು ಇರಲಿವೆ. ಪಾಲಿಕೆ ಸದಸ್ಯರ ಜವಾಬ್ದಾರಿ ಬಗ್ಗೆ ಬೆಳಕು ಚೆಲ್ಲಲಾಗುವುದು. ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎನ್.ಎಸ್.ಮುಕುಂದ, ಅಧ್ಯಕ್ಷ ಡಿ.ಎಸ್.ರಾಜಶೇಖರ್, ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ ಇದ್ದರು.