ನರಗುಂದ: ಪ್ರತಿಯೊಬ್ಬರು ತಮ್ಮ ತತ್ವ ಆದರ್ಶಗಳಿಗೆ ಬದ್ಧರಾಗಿ ಬದುಕಬೇಕು. ಸರಳ ಜೀವನ ನಡೆಸಬೇಕು. ಅದುವೇ ಉತ್ತಮ ವ್ಯಕ್ತಿತ್ವಕ್ಕೆ ರಹದಾರಿಯಾಗು ತ್ತದೆ ಎಂದು ಹುಬ್ಬಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ, ಲೇಖಕ ಎ.ಎಸ್. ಹೂಗಾರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಭಾನುವಾರ ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿಯವರ 80ನೇ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸಹಸ್ರ ಚಂದ್ರದರ್ಶನ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂಥಹ ಸರಳ ಜೀವನ ನಡೆಸಿ, ಆದರ್ಶ ಶಿಕ್ಷಕರಾಗಿ ಬಾಳಿದವರು ರುದ್ರನಾಥ ಕಲ್ಯಾಣಶೆಟ್ಟಿಯವರು. ಅವರ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ಬದುಕು ಕಲ್ಲು ಮುಳ್ಳುಗಳಿಂದ ಕೂಡಿ ಅದನ್ನು ದಾಟಿ, ಸಾಹಿತಿಯಾಗಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆಯುವ ಮೂಲಕ ನರಗುಂದದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರ ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.
ಅಭಿನಂದನೆ, ಸನ್ಮಾನ ಸ್ವೀಕರಿಸಿ ಮಾತ ನಾಡಿದ ಸಾಹಿತಿ ರುದ್ರನಾಥ ಕಲ್ಯಾಣ ಶೆಟ್ಟಿ, ಬಡತನದ ಬೇಗೆಯಲ್ಲಿ ಬೆಳೆದ ನನಗೆ ಕಷ್ಟಗಳೇ ಈ ಮಟ್ಟಕ್ಕೆ ಬೆಳೆ ಯಲು ಹಚ್ಚಿದವು. ನನ್ನ ಬದುಕೇ ನನ್ನ ಕಾವ್ಯಕ್ಕೆ ಪ್ರೇರಣೆ ನೀಡಿತು. ದಿ.ಡಿ.ಎಸ್. ಕಕಿರ್ಯವರ ಪ್ರಭಾವ ಹೆಚ್ಚಾಗಿ ನಾ ಒಬ್ಬ ಕವಿಯಾಗಿ ಬೆಳೆದೆ. ಕಷ್ಟ ಸುಖ ಗಳನ್ನು ಸಮಾನವಾಗಿ ಸ್ವೀಕರಿಸಿದಾಗ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ನಾನು ಕೊನೆ ಉಸಿರೆಳೆದಾಗ ನನ್ನ ದೇಹದಾನ ಮಾಡುವಂತೆ ಇಂಗಿತ ವ್ಯಕ್ತಪಡಿಸಿದ ರುದ್ರನಾಥ ಇದನ್ನು ನೆರವೇರಿಸುವಂತೆ ತಮ್ಮ ಕುಟುಂಬದ ಸದಸ್ಯರಲ್ಲಿ ಮನವಿ ಮಾಡಿದರು. ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಆಶೀವರ್ಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಎಫ್. ಬಿಜಾಪುರ, ಅತಿಥಿಗಳಾಗಿ ನಿವೃತ್ತ ಡಿಡಿ ಪಿಐ ಆರ್.ಸಿ. ಹಲಗತ್ತಿ, ಸಂಗಣ್ಣ ಲಿಂಬಿ ಕಾಯಿ ಮಾತನಾಡಿದರು.