ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹೋದರನ ಬೇಗ ಹುಡುಕಿ ಕೊಡಿ’

ಒಡಿಶಾದಲ್ಲಿ ಕನ್ನಡಿಗ ಅಧಿಕಾರಿ ನಾಪತ್ತೆ
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ ಜಿಲ್ಲೆ): ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಭಾರತೀಯ ಗಣಿ ಇಲಾಖೆಯಲ್ಲಿ (ಇಂಡಿಯನ್ ಬ್ಯುರೋ ಆಫ್ ಮೈನ್ಸ್) ಸಹಾಯಕ ನಿಯಂತ್ರಕರಾಗಿ ಕಾರ್ಯ ನಿರ್ವಹಿ­ಸು­ತ್ತಿದ್ದ ಕನ್ನಡಿಗ ಇಬ್ರಾಹಿಂ ಷರೀಫ್ (36) ನವೆಂಬರ್‌ 25 ರಿಂದ ನಾಪತ್ತೆಯಾಗಿ­ರುವುದರಿಂದ ಅವರ ಕುಟುಂಬ ವರ್ಗ  ಆತಂಕಗೊಂಡಿದೆ.

ಷರೀಫ್ ಅವರ ಊರಾದ ಯಶವಂತನಗರ ಗ್ರಾಮ­ದಲ್ಲಿ ಆತಂಕ, ದುಗುಡ ಎದ್ದು ಕಾಣುತ್ತಿದೆ. ‘ನಮ್ಮ ಸಹೋದರನ ಬಗ್ಗೆ ವಾರವಾದರೂ ಯಾವುದೇ ಸುಳಿವು ದೊರೆತಿಲ್ಲ. ಪೊಲೀಸರ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದೂ ತಿಳಿಯು­ತ್ತಿಲ್ಲ. ಕುಟುಂಬದವರೆಲ್ಲರೂ ಈ ಕುರಿತು ತುಂಬಾ ಚಿಂತಿತರಾಗಿದ್ದೇವೆ.

ರಾಜ್ಯ ಸರ್ಕಾರವು ಒಡಿಶಾ ಸರ್ಕಾರ ಮತ್ತು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿ­ಗ­ಳೊಂದಿಗೆ ಮಾತುಕತೆ ನಡೆಸಿ, ಸಹೋ-­ದರ­ನನ್ನು  ಶೀಘ್ರವೇ ಹುಡುಕಿಸಿಕೊಡಲಿ’ ಎಂದು ಭುವನೇಶ್ವರಕ್ಕೆ ಹೋಗಿರುವ ಇಬ್ರಾಹಿಂ  ಸಹೋದರ ಸುಭಾನ್ ತಮ್ಮನ್ನು ಸಂಪರ್ಕಿಸಿದ ‘ಪ್ರಜಾ­ವಾಣಿ’ ಮೂಲಕ ಮನವಿ ಮಾಡಿದರು.

‘ಬಕ್ರೀದ್‌ ಹಬ್ಬಕ್ಕೆ ಇಬ್ರಾಹಿಂ ಇಲ್ಲಿಗೆ ಬಂದು ಹೋಗಿದ್ದ. ಮಗ ಬೇಗನೇ ಮನೆಗೆ ಬರು­­­ವಂತಾ­ಗಲಿ...’ ಎಂದು ಯಶವಂತ­ನಗರದ ಮನೆಯ­ಲ್ಲಿದ್ದ ಅವರ ತಂದೆ ಗಿಡ್ಡುಸಾಬ್‌ ಕಣ್ಣೀರಿಟ್ಟರು.‘ಇಬ್ರಾಹಿಂ ಬೈಕ್‌ ಕಚೇರಿ­ಯಿಂದ ಸ್ವಲ್ಪ ದೂರದಲ್ಲಿಯ ಖಾಸಗಿ ಆಸ್ಪತ್ರೆಯ ಮುಂದೆ ಪತ್ತೆಯಾಗಿದ್ದು, ಅವರು ನಾಪತ್ತೆ­ಯಾಗಿ ಒಂದು ವಾರವಾದರೂ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಕುಟುಂಬದ ಸದಸ್ಯರು ಕಳವಳ ವ್ಯಕ್ತ­ಪಡಿಸಿದರು.

‘ಗೃಹ ಸಚಿವ ಮತ್ತು ರಾಜ್ಯ ಪೊಲೀಸ್ ವರಿಷ್ಠರೊಂದಿಗೆ ಮಾತ­ನಾಡಿದ್ದು, ಅವರೂ ಒಡಿಶಾ ಪೊಲೀಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿ­ದ್ದಾರೆ. ವಿಧಾನ ಮಂಡಲದ ಅಧಿವೇಶನ­ದಲ್ಲಿಯೂ ಈ ವಿಷಯ ಪ್ರಸ್ತಾಪಿಸುವೆ’ ಎಂದು ಶಾಸಕ ಈ.ತುಕಾರಾಂ  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT