ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮ ವಿಭೂತಿ ಪುರುಷ’

Last Updated 10 ಜನವರಿ 2014, 8:28 IST
ಅಕ್ಷರ ಗಾತ್ರ

ತುಮಕೂರು: ಸಿದ್ದರಾಮ ದೈವತ್ವ­ಕ್ಕೇರಿದ ವಿಭೂತಿ ಪುರುಷ. ಕಲ್ಯಾಣದ ಶರಣರ ಪ್ರಭಾವದಿಂದಾಗಿ ಕರ್ಮ­ಯೋಗದಿಂದ ಶಿವಯೋಗದತ್ತ ಹೊರಳಿ ಮಹಾಯೋಗಿ ಎನಿಸಿ­ಕೊಂಡ­ರು ಎಂದು ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌, ಬಸವ ಕೇಂದ್ರದ ವತಿಯಿಂದ ಜಯ­ದೇವ ಹಾಸ್ಟೆಲ್‌ನಲ್ಲಿ ಈಚೆಗೆ ನಡೆದ ಗಂಗಮ್ಮ ಮಧೂಡಯ್ಯ ದತ್ತಿ ಕಾರ್ಯ­ಕ್ರಮದಲ್ಲಿ ಉಪನ್ಯಾಸ ನೀಡಿ, ಸಿದ್ದರಾಮ ದೀನದಲಿತರಿಗಾಗಿ ಕೈಗೊಂ­ಡಿದ್ದ ಸಮಾಜ ಕಲ್ಯಾಣ ಕಾರ್ಯ ಅಲ್ಲಮನಂತಹ ಜ್ಞಾನ ಸದೃಶ ವ್ಯಕ್ತಿಯನ್ನು ಸೆಳೆಯಿತು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಡಿ.ಎನ್.ಯೋಗೀಶ್ ಮಾತ­ನಾಡಿ, ನಾಡಿನ ಚರಿತ್ರೆಯಲ್ಲೇ ನಿರ್ವಿಕಲ್ಪ ಸಮಾಧಿ ಮಾಡಿಕೊಂಡ ಮೊಟ್ಟಮೊದಲ ವ್ಯಕ್ತಿ ಸಿದ್ದರಾಮ. ಬಹುಪಾಲು ವಚನಗಳು ಗುರುಲಿಂಗ ಜಂಗಮದ ಸತ್ವವನ್ನು ಮೆರೆಯುತ್ತವೆ ಎಂದರು.

ಬಸವಕೇಂದ್ರದ ಅಧ್ಯಕ್ಷೆ ಸಿದ್ದ­ಗಂಗಮ್ಮ, ಶರಣೆ ಅಕ್ಕನಾಗಮ್ಮ, ದತ್ತಿ ದಾನಿ ಜಿ.ಎಸ್.ಮಧೂಡಯ್ಯ, ಗಂಗಮ್ಮ ಉಪಸ್ಥಿತರಿದ್ದರು. ಚಿಕ್ಕ­ಬೆಳ್ಳಾವಿ ಶಿವಕುಮಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT