ಭಾಲ್ಕಿ: ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಮಹಿಳೆಯರ ಪ್ರಗತಿ ಅಗತ್ಯ ಎಂದು ಪಂಚಶೀಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಲ್.ಜಿ.ಗುಪ್ತಾ ಅಭಿಪ್ರಾಯಪಟ್ಟರು.
ಪಟ್ಟಣದ ಎಂ.ಆರ್.ಎ. ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಸಾವಿತ್ರಿಬಾ ಫುಲೆ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ಫುಲೆ ಮಹಿಳೆಯರ ಶಿಕ್ಷಣಕ್ಕಾಗಿ ಹಗಲಿರಳು ದುಡಿದು, ಅವರ ಏಳಿಗೆಗಾಗಿ ಸಮಾಜದಲ್ಲಿ ಸಮಪಾಲು ತಂದುಕೊಟ್ಟರು ಎಂದರು.
ಪ್ರಾಚಾರ್ಯರಾದ ಆರ್.ಪಿ. ಮೋರೆ ಸಾವಿತ್ರಿಬಾ ಫುಲೆ ಅವರ ಜೀವನ ಕುರಿತು ಮಾತನಾಡಿದರು. ಪ್ರಮುಖರಾದ ಸಿ.ಬಿ. ಮಹಾಗಾವೆ, ಎಂ.ಆರ್. ಸೂರ್ಯವಂಶಿ, ಕೆ.ಎಂ.ಬಾಜೋಳಗೆ ಇತರರು ಉಪಸ್ಥಿತರಿದ್ದರು.ಸಂಗೀತಾ, ಶಾಂತಮ್ಮಾ ಸ್ವಾಗತಿಸಿದರು. ಪೂಜಾ ನಿರೂಪಿಸಿದರು. ಜ್ಯೋತಿ ವಂದಿಸಿದರು.