ಶಹಾಪುರ: ಆದಿಲ್ಶಾಹಿ ರಾಜರಿಗೆ ಗೋಗಿ ಕೇಂದ್ರವು ಹೊಸ ಬೆಳಕಿನ ಸ್ಫೂರ್ತಿಯ ನೆಲೆಯಾಗಿದೆ. ಧಾರ್ಮಿಕ ಗುರು ಸೂಫಿ ಸಂತ ಚಂದಾಹುಸೇನಿಯವರ ಆದರ್ಶ ತತ್ವಗಳನ್ನು ರಾಜ್ಯಭಾರದಲ್ಲಿ ಅಳವಡಿಸಿಕೊಂಡಿದ್ದರು. ಯೂಸೂಫ್ ಆದಿಲ್ಶಾಹಿ, ಇಸ್ಮಾಯಿಲ್ ಆದಿಲ್ಶಾಹಿ, ಇಬ್ರಾಹಿಂ ಆದಿಲ್ಶಾಹಿ ಸಮಾಧಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಭೀಮರಾಯನಗುಡಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಸಂಚಾಲಕ ಭಾಸ್ಕರಾವ ಮುಡಬೂಳ ಹೇಳಿದರು.
ತಾಲ್ಲೂಕಿನ ಗೋಗಿ ಗ್ರಾಮದ ಚಂದಾಹುಸೇನಿ ದರ್ಗಾದಲ್ಲಿ ಶನಿವಾರ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಹಾಗೂ ಕನ್ನಡ ಸಾಂಸ್ಕೃತಿಕ ಶಕ್ತಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಗೋಗಿ ಆದಲ್ಶಾಹಿ ಸ್ಮಾರಕಗಳ ರಕ್ಷಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತಿಹಾಸದ ಮಹತ್ವ ಸಾರುವ ಗೋಗಿ ಸ್ಮಾರಕದ ಮುಂದೆ ವಿವರವಾದ ಮಾಹಿತಿಯ ನಾಮಫಲಕವನ್ನು ಹಾಕಬೇಕು ಎಂದು ಹೇಳಿದರು.
ಪತ್ರಕರ್ತ ದೇವು ಪತ್ತಾರ ವಿಶೇಷ ಉಪನ್ಯಾಸವನ್ನು ನೀಡಿದರು. ಚಂದಾ ಹುಸೇನಿ ದರ್ಗಾದ ಸಯ್ಯದ್ ಹುಸೇನಿ ಸಜ್ಜಾದ, ಸಯ್ಯದ್ ಹುಸೇನಿ ಆರಿಫುಲ್ ಸಜ್ಜಾದ, ಸಯ್ಯದ್ ಹುಸೇನಿ ನಶಿನ, ಸಾಹೇಬಗೌಡ ಬಿಳ್ವಾರ, ರೈತ ಮುಖಂಡ ಮಲ್ಲಣ್ಣ ಪರಿವಾಣ, ಮಾನಪ್ಪ, ಕೃಷ್ಣಾ ಸುಬೇದಾರ, ರಾಜಗೋಪಾಲ ವಿಭೂತೆ, ತಿಪ್ಪಣ್ಣ ಕ್ಯಾತನಾಳ, ರಾಘವೇಂದ್ರ ಹಾರಣಗೇರಾ, ಶಶಿಕಾಂತ ಮಾನು, ಅತಿಕುಲ್ ಹುಸೇನಿ, ನಾಸಿರುದ್ಧೀನ್ ಷಾ, ವಿಶ್ವನಾಥ ಫಿರಂಗಿ ಅಂಬರೇಶ ಇಟಗಿ, ಉಮೇಶ ಕುಲಕರ್ಣಿ ಇದ್ದರು.