ಸೋಮವಾರ, 8 ಜೂನ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ
Published 8 ಏಪ್ರಿಲ್ 2026, 22:39 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ. ಕಷ್ಟದ ದಿನಗಳು ದೂರಾಗಿ ಸುಖ ನೆಮ್ಮದಿಯ ಭಾವವನ್ನು ಕಾಣಲಿದ್ದೀರಿ. ಪ್ರವಾಸಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ.
ವೃಷಭ
ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ವ್ಯವಹರಿಸುವ ವ್ಯಕ್ತಿಯ ಪೂರ್ವಾಪರ ತಿಳಿದಿರುವುದು ಉತ್ತಮ. ಷೇರು ಬಂಡವಾಳಗಳನ್ನು ಹೆಚ್ಚಿಸಿಕೊಳ್ಳುವಿರಿ.
ಮಿಥುನ
ವಿಭಿನ್ನ ಜನರನ್ನು ಭೇಟಿಯಾಗಲಿರುವುದರಿಂದ ವೃತ್ತಿ ಬದುಕು ಹಾಗೂ ಸಾಮಾಜಿಕ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಧೈರ್ಯದಿಂದ ಕಾರ್ಯಪ್ರವೃತ್ತರಾದಲ್ಲಿ ಇಷ್ಟಾರ್ಥ ಸಿದ್ಧಿಸಲಿದೆ.
ಕರ್ಕಾಟಕ
ನಾನಾ ಬಗೆಯ ಚಿಂತನೆಗಳು ಕಾರ್ಯರೂಪಕ್ಕೆ ಬರಲಿವೆ. ಆದರೆ ಆಕಸ್ಮಿಕವಾಗಿ ಮಾಡುವ ಕೆಲಸದಿಂದ ಧರ್ಮಸಂಕಟದಲ್ಲಿ ಸಿಲುಕಲಿದ್ದೀರಿ. ಮಕ್ಕಳಿಗಾಗಿ ವಸ್ತುಗಳನ್ನು ಖರೀದಿಸುವಿರಿ.
ಸಿಂಹ
ಬದುಕಿನ ಸಾರ ತಿಳಿಯುವುದು ಉತ್ತಮ ವಿಚಾರ. ಕುಟುಂಬದ ಹಲವಾರು ತಾಪತ್ರಯಗಳಿಗೆ ಊರಿನ ಪ್ರಾಜ್ಞರಿಂದ ಪರಿಹಾರವನ್ನು ಪಡೆದುಕೊಳ್ಳುವಿರಿ.
ಕನ್ಯಾ
ಪಾಲುದಾರರ ಜತೆಗಿನ ವ್ಯವಹಾರಗಳಲ್ಲಿ ಅತಿಯಾದ ಪಾರದರ್ಶಕತೆ ಅಪಾಯವನ್ನು ತಂದೊಡ್ಡಬಹುದು. ಮನೋಭಿಲಾಷೆಯಂತೆ ಸಂಘ ಸಂಸ್ಥೆಗಳ ಅಧಿಕಾರ ಪ್ರಾಪ್ತಿ. ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ತುಲಾ
ಮನೆಯಲ್ಲಿನ ಹಿರಿಯ ನಾಗರಿಕರ ವಿಚಾರವಾಗಿ ಸಣ್ಣ ಪುಟ್ಟ ವಿಚಾರಗಳಲ್ಲೂ ನಿಗಾವಹಿಸಿ. ಸಂದರ್ಶನಕಾರರಿಗೆ ಪ್ರಭಾವಿ ವ್ಯಕ್ತಿಗಳನ್ನು ಸಂದರ್ಶಿಸಲು ಅವಕಾಶ ಸಿಗಲಿದೆ.
ವೃಶ್ಚಿಕ
ಸಂಘ ಸಂಸ್ಥೆಗಳ ವಿಚಾರವನ್ನು ಮುಕ್ತವಾಗಿ ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತನ್ನಿ. ಅನವಶ್ಯಕವಾಗಿ ಎಳೆದುಕೊಳ್ಳುವ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.
ಧನು
ನಿಮ್ಮ ಮಾತನ್ನು ಪ್ರಸ್ತುತ ಪಡಿಸುವಾಗ ಅದ್ಭುತ ವಾಗ್ಛರಿ ಎಲ್ಲರನ್ನೂ ನಿಮ್ಮ ಮಾತಿನಲ್ಲಿ ಹಿಡಿದು ನಿಲ್ಲಿಸುತ್ತದೆ. ನೂತನ ಯೋಜನೆಗಳಿಗೆ ಹಣಕಾಸಿನ ಕೊರತೆ ಇರುವುದಿಲ್ಲ.
ಮಕರ
ಚೋರ ಬಾಧೆ ಇರುವ ಕಾರಣದಿಂದ ದೊಡ್ಡ ಮಟ್ಟದ ಹಣ ಅಥವಾ ಬೆಲೆ ಬಾಳುವ ವಸ್ತುಗಳನ್ನು ಹಿಡಿದುಕೊಂಡು ಸಂಚರಿಸುವುದು ಸರಿಯಲ್ಲ. ಉರಿಯುತ್ತಿರುವಂಥ ಬೆಂಕಿಗೆ ಶತ್ರುಗಳು ತುಪ್ಪ ಸುರಿಯಬಹುದು.
ಕುಂಭ
ಗೊಂದಲಗಳಿಗೆ ಒಳಗಾಗದೇ ನಿಲುವು ಸ್ಪಷ್ಟಪಡಿಸಿಕೊಂಡಲ್ಲಿ ಗೆಲುವು ನಿಮ್ಮದಾಗಲಿದೆ. ಬುದ್ಧಿವಂತಿಕೆಯಿಂದ ಕೂಡಿರುವ ಕಾರ್ಯವೈಖರಿ ನಿಮ್ಮದಾಗಿರುತ್ತದೆ.
ಮೀನ
ಹಿಂತಿರುಗಿ ಬರಬೇಕಿದ್ದ ಹಣಕ್ಕೆ ಇರುವ ಅಡಚಣೆಗಳನ್ನು ನಿವಾರಿಸಿಕೊಳ್ಳಿ. ಪ್ರೀತಿ ಪಾತ್ರರಿಂದ ತಾತ್ಕಾಲಿಕವಾಗಿ ದೂರವಾಗುವ ಸಂಭವವಿದೆ. ತಂದೆಯಿಂದ ವಾಹನ ಅಥವಾ ವಸ್ತ್ರಾಭರಣ ಪ್ರಾಪ್ತಿಯಾಗಲಿದೆ.
ADVERTISEMENT
ADVERTISEMENT