<p><strong>ಹೈದರಾಬಾದ್</strong>: ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಕೊಡುವ ಬಗ್ಗೆ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.</p><p>ನಿನ್ನೆ ಹೈದರಾಬಾದ್ನ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಉದ್ದೇಶ ಮಹಿಳಾ ಸಬಲೀಕರಣ ಒಂದೇ ಅಲ್ಲ, ಪರಿಸರ ಮಾಲಿನ್ಯ ತಗ್ಗಿಸುವುದೂ ಆಗಿದೆ ಎಂದು ಹೇಳಿದರು.</p><p>ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಬಗ್ಗೆ ನಮ್ಮ ಪಕ್ಷ ಮೊದಲೇ ಪ್ರಣಾಳಿಕೆಯಲ್ಲಿ ಸೂಚ್ಯವಾಗಿಸಿತ್ತು. ಆದರೆ, ಸಾಧಕ ಬಾಧಕಗಳ ಬಗ್ಗೆ ಅರಿತು ತಡೆಹಿಡಿಯಲಾಗಿತ್ತು. ಆದರೆ, ಕೊಡುವ ಬಗ್ಗೆ ಈಗ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದರು.</p><p>ಈ ವರ್ಷ ಆಗದಿದ್ದರೂ ಮುಂದಿನ ವರ್ಷ ಖಂಡಿತವಾಗಿಯೂ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.</p><p>ನಾವು ಹೈದರಾಬಾದ್ ನಗರವನ್ನು ಮಾಲಿನ್ಯ ಮುಕ್ತ ನಗರಿಯನ್ನಾಗಿ ಮಾಡಲಿದ್ದೇವೆ. ಅಷ್ಟೇ ಏಕೆ ನಮ್ಮ ಪ್ರತಿಸ್ಪರ್ಧಿ ಬೆಂಗಳೂರು, ಮುಂಬೈ ಅಲ್ಲ, ಸಿಂಗಪುರ, ಟೋಕಿಯೋ ಎಂದೂ ಹೇಳಿದರು.</p><p>ಹೈದರಾಬಾದ್ನಲ್ಲಿರುವ ಡಿಸೇಲ್ ಇತರ ಇಂಧನ ಆಧರಿತ 2 ಲಕ್ಷ ಆಟೊಗಳನ್ನು ಇವಿ ಆಟೊಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಕೊಡುವ ಬಗ್ಗೆ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.</p><p>ನಿನ್ನೆ ಹೈದರಾಬಾದ್ನ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಉದ್ದೇಶ ಮಹಿಳಾ ಸಬಲೀಕರಣ ಒಂದೇ ಅಲ್ಲ, ಪರಿಸರ ಮಾಲಿನ್ಯ ತಗ್ಗಿಸುವುದೂ ಆಗಿದೆ ಎಂದು ಹೇಳಿದರು.</p><p>ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಬಗ್ಗೆ ನಮ್ಮ ಪಕ್ಷ ಮೊದಲೇ ಪ್ರಣಾಳಿಕೆಯಲ್ಲಿ ಸೂಚ್ಯವಾಗಿಸಿತ್ತು. ಆದರೆ, ಸಾಧಕ ಬಾಧಕಗಳ ಬಗ್ಗೆ ಅರಿತು ತಡೆಹಿಡಿಯಲಾಗಿತ್ತು. ಆದರೆ, ಕೊಡುವ ಬಗ್ಗೆ ಈಗ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದರು.</p><p>ಈ ವರ್ಷ ಆಗದಿದ್ದರೂ ಮುಂದಿನ ವರ್ಷ ಖಂಡಿತವಾಗಿಯೂ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.</p><p>ನಾವು ಹೈದರಾಬಾದ್ ನಗರವನ್ನು ಮಾಲಿನ್ಯ ಮುಕ್ತ ನಗರಿಯನ್ನಾಗಿ ಮಾಡಲಿದ್ದೇವೆ. ಅಷ್ಟೇ ಏಕೆ ನಮ್ಮ ಪ್ರತಿಸ್ಪರ್ಧಿ ಬೆಂಗಳೂರು, ಮುಂಬೈ ಅಲ್ಲ, ಸಿಂಗಪುರ, ಟೋಕಿಯೋ ಎಂದೂ ಹೇಳಿದರು.</p><p>ಹೈದರಾಬಾದ್ನಲ್ಲಿರುವ ಡಿಸೇಲ್ ಇತರ ಇಂಧನ ಆಧರಿತ 2 ಲಕ್ಷ ಆಟೊಗಳನ್ನು ಇವಿ ಆಟೊಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>