ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್ನಲ್ಲಿ ಯಾವ ಜಿಲ್ಲೆಗೆ ಏನೇನು ಯೋಜನೆ, ಅನುದಾನ ಘೋಷಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ
ರಾಮನಗರ
* ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆ
* ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್– ₹ 10 ಕೋಟಿ
* ರಣಹದ್ದು ಧಾಮದಲ್ಲಿ ಸಂತಾನೋತ್ಪತ್ತಿ ಕೇಂದ್ರ– ₹ 2 ಕೋಟಿ
ಬೆಂಗಳೂರು ಗ್ರಾಮಾಂತರ
* ಹರಳೂರು–ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಎಕ್ಯುಪ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್
ದಕ್ಷಿಣಕನ್ನಡ
* ಮೂಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ– ₹ 2 ಕೋಟಿ
* ಕುಳಾಯಿಯಲ್ಲಿ ಮೀನು ರಫ್ತು ಸ್ಥಾವರ ನಿರ್ಮಾಣ– ₹ 12.50 ಕೋಟಿ
ಉಡುಪಿ
* ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರು– ₹ 181 ಕೋಟಿ
* ಹಂಗಾರಕಟ್ಟೆ ಬಂದರು ಅಭಿವೃದ್ಧಿ– ₹ 130 ಕೋಟಿ
* ಕಾರ್ಕಳದಲ್ಲಿ ಜವಳಿ ಪಾರ್ಕ್
ಉತ್ತರ ಕನ್ನಡ ಜಿಲ್ಲೆ
* ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತಲು– ₹ 85 ಕೋಟಿ
* ಕೊಡೇರಿ ಬಂದರು ಅಭಿವೃದ್ಧಿ– ₹ 2 ಕೋಟಿ
* ಶಿರಸಿ ಸರ್ಕಾರಿ ಆಸ್ಪತ್ರೆ 200 ಹಾಸಿಗೆಗೆ ಹೆಚ್ಚಿಸಿ ಮೇಲ್ದರ್ಜೆಗೆ
* ಸಿದ್ಧಾಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ
* ಖಾಸಗಿ ಸಹಭಾಗಿತ್ವದಲ್ಲಿ ₹ 2,500 ಕೋಟಿ ವೆಚ್ಚದಲ್ಲಿ ಪಾವಿನಕುರ್ವೆ/ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ
* ಕಡಲಧಾಮ ಸ್ಥಾಪನೆ– ₹ 1 ಕೋಟಿ
* ಕಾರವಾರ ಬಂದರಿಗೆ ಶಾಶ್ವತ ಅಗ್ನಿಶಾಮಕ ಉಪಕರಣ– ₹ 19 ಕೋಟಿ
ಹಾವೇರಿ
* 20 ಹಾಸಿಗೆಗೆಳ ಆಯುಷ್ ಸಂಯುಕ್ತ ಆಸ್ಪತ್ರೆ ₹ 20 ಕೋಟಿಯಲ್ಲಿ ಆರಂಭ. ಪ್ರಸಕ್ತ ವರ್ಷ ₹ 5 ಕೋಟಿ
* ಶಿಗ್ಗಾವಿಯಲ್ಲಿ ಜವಳಿ ಪಾರ್ಕ್
* ಸಂತ ಶಿಶುನಾಳ ಶರೀಫರ ಗ್ರಾಮ ಅಭಿವೃದ್ಧಿ– ₹ 5 ಕೋಟಿ
* ಹಿರೇಕೆರೂರಿನಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗೆ ಪ್ರೋತ್ಸಾಹ
ಕಲಬುರ್ಗಿ
ಬ್ರೈಲ್ ಕಂ ಟಾಕಿಂಗ್ ಲೈಬ್ರರಿ
ಮೈಸೂರು
* ಸರ್ಕಾರಿ ಬ್ರೈಲ್ ಮುದ್ರಣಾಲಯ–₹ 80 ಲಕ್ಷ
ವಿಜಯಪುರ
* ‘ಜಲಧಾರೆ’ ಯೋಜನೆಯ ಮೊದಲ ಹಂತ
ಮಂಡ್ಯ
‘ಜಲಧಾರೆ’ ಯೋಜನೆಯ ಮೊದಲ ಹಂತ
ಬೆಂಗಳೂರು
* ಸೆಂಟರ್ ಫಾರ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ ಸ್ಥಾಪನೆ– ₹ 5 ಕೋಟಿ
* ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ಟ್ರಾನ್ಸ್ಲೇಷನ್ ಪಾರ್ಕ್ – 3 ವರ್ಷಗಳಲ್ಲಿ ₹ 60 ಕೋಟಿ ಅನುದಾನ
* ಕೃಷಿ ನಾವೀನ್ಯತಾ ಕೇಂದ್ರ – ₹ 20 ಕೋಟಿ
* ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸೇವಾ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ– ₹ 20 ಕೋಟಿ
* ವಿವೇಕಾನಂದ ಯುವ ಕೇಂದ್ರ ಸ್ಥಾಪನೆ– ₹ 2 ಕೋಟಿ
* ನಾಲ್ಕೂ ದಿಕ್ಕಿನಲ್ಲಿ ಕಲಾಕ್ಷೇತ್ರ– ₹ 60 ಕೋಟಿ
* ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂಪೇಗೌಡರ ಕಂಚಿನ ಪ್ರತಿಮೆ– ₹ 60 ಕೋಟಿ
* ಚಿತ್ರಕಲಾ ಪರಿಷತ್ನಲ್ಲಿ ಚಿತ್ರಸಂತೆ– ₹ 1 ಕೋಟಿ
* ಖಾಸಗಿ ಸಹಭಾಗಿತ್ವದಲ್ಲಿ ‘ಫಿಲಂ ಸಿಟಿ’ ಸ್ಥಾಪನೆ– ₹ 500 ಕೋಟಿ
* ಐಐಟಿ ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಅಭಿವೃದ್ಧಿಗೆ ₹ 10 ಕೋಟಿ
ತುಮಕೂರು
* ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್
ಬಾಗಲಕೋಟೆ
* ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ಕ್ಕೆ ₹ 100 ಕೋಟಿ
* ಬಾದಾಮಿ ಅಭಿವೃದ್ಧಿ – ₹ 25 ಕೋಟಿ
ಚಿತ್ರದುರ್ಗ
* ಮುರುಘಾ ಮಠದ ಆವರಣದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ– ₹ 20 ಕೋಟಿ
* ಎಸ್. ನಿಜಲಿಂಗಪ್ಪ ವಾಸವಿದ್ದ ಮನೆ ಸಂರಕ್ಷಣೆ– ₹ 5 ಕೋಟಿ
* ವೀರಮದಕರಿ ನಾಯಕ, ಒನಕೆ ಓಬವ್ವ ತಾಣ ಅಭಿವೃದ್ಧಿ
ಧಾರವಾಡ
* ಕಾನೂನು ವಿವಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ– ₹ 1 ಕೋಟಿ
ಹಾಸನ
* ಎಸ್.ಎಲ್. ಭೈರಪ್ಪ ಹುಟ್ಟೂರು ಸಂತೆಶಿವರ ಗ್ರಾಮ ಅಭಿವೃದ್ಧಿ– ₹ 5 ಕೋಟಿ
ರಾಯಚೂರು
* ಮಂತ್ರಾಲಯದಲ್ಲಿ ಅತಿಥಿಗೃಹ
ಕೊಪ್ಪಳ
* ಗಂಗಾವತಿಯಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನ ಅಭಿವೃದ್ಧಿ– ₹ 20 ಕೋಟಿ
ಶಿವಮೊಗ್ಗ
* ಸಾಗರ ತಾಲ್ಲೂಕಿನ ಜೋಗ ಜಲಪಾತ ಅಭಿವೃದ್ಧಿ
* ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಮಿನಿ ಮೃಗಾಲಯ ಉನ್ನತೀಕರಣ– ₹ 5 ಕೋಟಿ
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.