ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವುದು ‘ದೂರದೃಷ್ಟಿಯ ಸಮತೋಲಿತ ಬಜೆಟ್’ ಎಂದು ಸಚಿವ ಶ್ರೀರಾಮುಲು ಬಣ್ಣಿಸಿದ್ದಾರೆ.
ಈ ಕುರಿತು ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕೋವಿಡ್ ನಂತರ ಇದ್ದ ಆರ್ಥಿಕ ಸವಾಲುಗಳ ಮಧ್ಯೆ, ಕಲ್ಯಾಣ ಯೋಜನೆಗಳಿಗೆ ಏನೂ ಕಡಿಮೆ ಆಗದಂತೆ ಮಾಡಿರುವ ಉತ್ತಮ ಲೆಕ್ಕಾಚಾರವಿದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಹಾಗೂ ಉತ್ತಮ ಬಜೆಟ್ಗೆ ನನ್ನ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.
‘ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022-22 ನೇ ಸಾಲಿನ ಬಜೆಟ್ ಅಭಿವೃದ್ಧಿ ಪರ, ಪ್ರಗತಿಪರ ಜನಪರ ಇರುವ- ತ್ರಿಬಲ್ ಡೆಕ್ಕರ್ ಬಜೆಟ್’ ಎಂದೂ ಶ್ರೀರಾಮುಲು ಹೇಳಿದ್ದಾರೆ.
ಆರ್ಥಿಕತೆಯ ಜೊತೆಗೆ ದೂರದೃಷ್ಟಿ ಇರುವ ಸಮತೋಲಿತ ಬಜೆಟ್ ಇದಾಗಿದೆ. ಕೋವಿಡ್ ನಂತರ ಇದ್ದ ಆರ್ಥಿಕ ಸವಾಲುಗಳ ಮಧ್ಯೆ, ಕಲ್ಯಾಣ ಯೋಜನೆಗಳಿಗೆ ಏನು ಕಡಿಮೆ ಆಗದಂತೆ ಮಾಡಿರುವ ಉತ್ತಮ ಲೆಕ್ಕಾಚಾರ.