<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸುತ್ತಿದ್ದು ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.</p><p><strong>ಘೋಷಣೆ ಮಾಡಿದ ಪ್ರಮುಖ ಅಂಶಗಳು...</strong></p><p> * ʻಬೆಂಗಳೂರು ಹಬ್ಬʼ ಸಹಯೋಗದೊಂದಿಗೆ ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮಗಳ ಆಯೋಜನೆಗೆ <br>₹ 5 ಕೋಟಿ</p><p>* ₹ 3 ಕೋಟಿ ವೆಚ್ಚದಲ್ಲಿ ʻಜಾನಪದ ಸಂಗಮʼ ಸಮಾವೇಶದ ಆಯೋಜನೆ.<br>* ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ₹ 2 ಕೋಟಿ <br>* ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ.<br>* ಡಾ|| ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ.<br>* ಮಕ್ಕಳಿಗಾಗಿ ಪ್ರಸಿದ್ಧ ಕವಿ ಮತ್ತು ಸಾಹಿತಿಗಳ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳ ಮುದ್ರಣ.<br>* ಗೋರ್ ಬಂಜಾರ ಸಮುದಾಯದ ವಿಶ್ವಕೋಶದ ಪ್ರಕಟಣೆ.<br>* ʻಅರ್ಧಶತಮಾನದ ದಲಿತ ಸಾಹಿತ್ಯʼ ಪುಸ್ತಕ ಪ್ರಕಟಣೆಗೆ ₹ 1 ಕೋಟಿ<br>* ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ.ಆರ್. ನಾಗರಾಜ ರವರ ಹೆಸರಿನಲ್ಲಿ ಟ್ರಸ್ಟ್ ರಚನೆ.<br>* ನಾ.ಡಿಸೋಜ ವಿರಚಿತ ʻಕೊಳಗʼ ಕಾದಂಬರಿ ಆಧರಿತ ನಾಟಕ ಪ್ರದರ್ಶನ.<br>* ಖ್ವಾಜಾ ಬಂದೇ ನವಾಜ್ರ ಕುರಿತು ಅಹೋರಾತ್ರಿ ನಾಟಕ ಪ್ರದರ್ಶನ.<br>* ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ₹ 2 ಕೋಟಿ<br>* ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ.<br>* ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಅಂಡಮಾನ್ನಲ್ಲಿ ಕರಾಳ ಶಿಕ್ಷೆಗೊಳಗಾದ ಕನ್ನಡಿಗರ ವೀರಗಾಥೆಯ ಕುರಿತು ʻಅನಾಮಿಕ ಸ್ವಾತಂತ್ರ್ಯ ಹೋರಾಟಗಾರರುʼ ಕೃತಿಗಳ ಪ್ರಕಟಣೆ.<br>* ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ <br> ₹ 2 ಕೋಟಿ<br>* ಕೋಲಾರದ ‘ಆದಿಮ’, ಮೈಸೂರಿನ ʻರಂಗನಿರಂತರʼ, ಬೆಂಗಳೂರಿನ ʻಸಮುದಾಯʼಗಳಿಗೆ ಅನುದಾನ. <br>* ಕರಗ ಉತ್ಸವಕ್ಕೆ ₹ 2 ಕೋಟಿ ರೂ.<br>* ₹ 5 ಕೋಟಿ ವೆಚ್ಚದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದ ಉನ್ನತೀಕರಣ.</p>.Karnataka Budget 2026: ಬಜೆಟ್ ಮುಖ್ಯಾಂಶಗಳು .ರಾಜ್ಯ ಬಜೆಟ್–2026: ಮೀನುಗಾರಿಕೆ ಕಿಟ್ ದರ ಹೆಚ್ಚಳ ಸೇರಿ ಹಲವು ಯೋಜನೆ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸುತ್ತಿದ್ದು ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.</p><p><strong>ಘೋಷಣೆ ಮಾಡಿದ ಪ್ರಮುಖ ಅಂಶಗಳು...</strong></p><p> * ʻಬೆಂಗಳೂರು ಹಬ್ಬʼ ಸಹಯೋಗದೊಂದಿಗೆ ರಾಜ್ಯದ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮಗಳ ಆಯೋಜನೆಗೆ <br>₹ 5 ಕೋಟಿ</p><p>* ₹ 3 ಕೋಟಿ ವೆಚ್ಚದಲ್ಲಿ ʻಜಾನಪದ ಸಂಗಮʼ ಸಮಾವೇಶದ ಆಯೋಜನೆ.<br>* ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ₹ 2 ಕೋಟಿ <br>* ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ.<br>* ಡಾ|| ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ.<br>* ಮಕ್ಕಳಿಗಾಗಿ ಪ್ರಸಿದ್ಧ ಕವಿ ಮತ್ತು ಸಾಹಿತಿಗಳ ಕೃತಿಗಳ ಬಣ್ಣದ ಚಿತ್ರಗಳು ಮತ್ತು ಸಣ್ಣ ವಾಕ್ಯಗಳ ಪುಸ್ತಕಗಳ ಮುದ್ರಣ.<br>* ಗೋರ್ ಬಂಜಾರ ಸಮುದಾಯದ ವಿಶ್ವಕೋಶದ ಪ್ರಕಟಣೆ.<br>* ʻಅರ್ಧಶತಮಾನದ ದಲಿತ ಸಾಹಿತ್ಯʼ ಪುಸ್ತಕ ಪ್ರಕಟಣೆಗೆ ₹ 1 ಕೋಟಿ<br>* ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ.ಆರ್. ನಾಗರಾಜ ರವರ ಹೆಸರಿನಲ್ಲಿ ಟ್ರಸ್ಟ್ ರಚನೆ.<br>* ನಾ.ಡಿಸೋಜ ವಿರಚಿತ ʻಕೊಳಗʼ ಕಾದಂಬರಿ ಆಧರಿತ ನಾಟಕ ಪ್ರದರ್ಶನ.<br>* ಖ್ವಾಜಾ ಬಂದೇ ನವಾಜ್ರ ಕುರಿತು ಅಹೋರಾತ್ರಿ ನಾಟಕ ಪ್ರದರ್ಶನ.<br>* ಚಾಮರಾಜೇಂದ್ರ ದೃಶ್ಯ ಕಲಾ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ₹ 2 ಕೋಟಿ<br>* ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ.<br>* ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಅಂಡಮಾನ್ನಲ್ಲಿ ಕರಾಳ ಶಿಕ್ಷೆಗೊಳಗಾದ ಕನ್ನಡಿಗರ ವೀರಗಾಥೆಯ ಕುರಿತು ʻಅನಾಮಿಕ ಸ್ವಾತಂತ್ರ್ಯ ಹೋರಾಟಗಾರರುʼ ಕೃತಿಗಳ ಪ್ರಕಟಣೆ.<br>* ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ <br> ₹ 2 ಕೋಟಿ<br>* ಕೋಲಾರದ ‘ಆದಿಮ’, ಮೈಸೂರಿನ ʻರಂಗನಿರಂತರʼ, ಬೆಂಗಳೂರಿನ ʻಸಮುದಾಯʼಗಳಿಗೆ ಅನುದಾನ. <br>* ಕರಗ ಉತ್ಸವಕ್ಕೆ ₹ 2 ಕೋಟಿ ರೂ.<br>* ₹ 5 ಕೋಟಿ ವೆಚ್ಚದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದ ಉನ್ನತೀಕರಣ.</p>.Karnataka Budget 2026: ಬಜೆಟ್ ಮುಖ್ಯಾಂಶಗಳು .ರಾಜ್ಯ ಬಜೆಟ್–2026: ಮೀನುಗಾರಿಕೆ ಕಿಟ್ ದರ ಹೆಚ್ಚಳ ಸೇರಿ ಹಲವು ಯೋಜನೆ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>