<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27 ನೇ ಸಾಲಿನ 17ನೇ ದಾಖಲೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ ₹4,48 ಲಕ್ಷ ಕೋಟಿಯಾಗಿದೆ. ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಸಾಹಿತ್ಯದ ಕೆಲವು ಪದ್ಯಗಳನ್ನು ಉಲ್ಲೇಖ ಮಾಡಿದ್ದಾರೆ. ಕುವೆಂವು, ತೇಜಸ್ವಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರೆ ವಚನಕಾರರ ವಚನದ ಸಾಲುಗಳು ಹಾಗೂ ನುಡಿಮುತ್ತುಗಳನ್ನು ಉಲ್ಲೇಖಿಸಿದ್ದಾರೆ. ಈ ಬಾರಿಯ ಬಜೆಟ್ ಆರ್ಥಿಕತೆಯೊಂದಿಗೆ ಸಾಹಿತ್ಯವನ್ನು ಮೆಲುಕು ಹಾಕಿದೆ.</p>.ರಾಜ್ಯ ಬಜೆಟ್ 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ; ಸಿದ್ಧರಾಮಯ್ಯ ಘೋಷಣೆ.<div><blockquote>ಧನಶೀಲ ಮನಶೀಲ ತನುಶೀಲಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲಇಂತೀ ವ್ರತಸಂಪದವೆಲ್ಲವೂಅದಾರ ಕುರಿತು ಮಾಡುವ ನೇಮಎಂಬುದ ತಾನರಿಯಬೇಕು</blockquote><span class="attribution">-ವಚನಕಾರ್ತಿ ಅಕ್ಕಮ್ಮ</span></div>.ಗಡಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ: ಬಜೆಟ್ ಬಗ್ಗೆ ಬೆಳಗಾವಿ ಜನರ ನಿರೀಕ್ಷೆ ನೂರಾರು.<div><blockquote>ನ್ಯಾಯವು ನಮ್ಮ ಪರವಾಗಿರುವಾಗ, ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ. ಈ ಹೋರಾಟವು ನನಗೆ ಹರ್ಷದಾಯಕ ಸಂಗತಿಯಾಗಿದೆ. ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ.</blockquote><span class="attribution">ಡಾ. ಬಿ.ಆರ್. ಅಂಬೇಡ್ಕರ್</span></div>.<div><blockquote>ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ</blockquote><span class="attribution">-ವಚನಕಾರ ಶಿವಲೆಂಕ ಮಂಚಣ್ಣ</span></div>.<div><blockquote>ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ, ನಮ್ಮ ಉಸಿರು ಉಡುಗುತ್ತಾ ಬಂದಂತೆ</blockquote><span class="attribution">-ಕೆ.ಪಿ. ಪೂರ್ಣಚಂದ್ರ ತೇಜಸ್ವಿ</span></div>.<div><blockquote> ಗುಲಾಬಿಯೆಂದರೆಅಮ್ಮನಿಗೆ ಇಷ್ಟಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಕಷ್ಟ</blockquote><span class="attribution">-ಬಿ.ಎಂ. ಬಶೀರ್</span></div>.<div><blockquote>ಕುರಿಗಳ ಕಾಯುವ ಕುರುಬನ ಕೂಗುಜನರ ಮಾತು ಕವನಸೋತ ರಟ್ಟೆಗಳ ಹೂತ ಕಾಲುಗಳಬೆವರ ಹಸಿರು ಕವನ</blockquote><span class="attribution">- ಸಿದ್ದಲಿಂಗಯ್ಯ</span></div>.<div><blockquote>ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ,ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ</blockquote><span class="attribution">-ಬಿ.ಆರ್. ಲಕ್ಷ್ಮಣರಾವ್</span></div>.<div><blockquote>ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ; ಬರಲಿ ವಿಜ್ಞಾನ ಬುದ್ಧಿ</blockquote><span class="attribution">- ರಾಷ್ಟ್ರಕವಿ ಕುವೆಂಪು</span></div>.<div><blockquote>ಜನಮನದ ನುಡಿಯಾಗಿ ಬಾಳು ತಾಯಿ, ಮೂಕಜನರಿಗು ಕೂಡ ಬರಲಿ ಬಾಯಿ</blockquote><span class="attribution">-ದಿನಕರ ದೇಸಾಯಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27 ನೇ ಸಾಲಿನ 17ನೇ ದಾಖಲೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ ₹4,48 ಲಕ್ಷ ಕೋಟಿಯಾಗಿದೆ. ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಸಾಹಿತ್ಯದ ಕೆಲವು ಪದ್ಯಗಳನ್ನು ಉಲ್ಲೇಖ ಮಾಡಿದ್ದಾರೆ. ಕುವೆಂವು, ತೇಜಸ್ವಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಇತರೆ ವಚನಕಾರರ ವಚನದ ಸಾಲುಗಳು ಹಾಗೂ ನುಡಿಮುತ್ತುಗಳನ್ನು ಉಲ್ಲೇಖಿಸಿದ್ದಾರೆ. ಈ ಬಾರಿಯ ಬಜೆಟ್ ಆರ್ಥಿಕತೆಯೊಂದಿಗೆ ಸಾಹಿತ್ಯವನ್ನು ಮೆಲುಕು ಹಾಕಿದೆ.</p>.ರಾಜ್ಯ ಬಜೆಟ್ 2026: ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ; ಸಿದ್ಧರಾಮಯ್ಯ ಘೋಷಣೆ.<div><blockquote>ಧನಶೀಲ ಮನಶೀಲ ತನುಶೀಲಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲಇಂತೀ ವ್ರತಸಂಪದವೆಲ್ಲವೂಅದಾರ ಕುರಿತು ಮಾಡುವ ನೇಮಎಂಬುದ ತಾನರಿಯಬೇಕು</blockquote><span class="attribution">-ವಚನಕಾರ್ತಿ ಅಕ್ಕಮ್ಮ</span></div>.ಗಡಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ: ಬಜೆಟ್ ಬಗ್ಗೆ ಬೆಳಗಾವಿ ಜನರ ನಿರೀಕ್ಷೆ ನೂರಾರು.<div><blockquote>ನ್ಯಾಯವು ನಮ್ಮ ಪರವಾಗಿರುವಾಗ, ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ. ಈ ಹೋರಾಟವು ನನಗೆ ಹರ್ಷದಾಯಕ ಸಂಗತಿಯಾಗಿದೆ. ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ.</blockquote><span class="attribution">ಡಾ. ಬಿ.ಆರ್. ಅಂಬೇಡ್ಕರ್</span></div>.<div><blockquote>ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ</blockquote><span class="attribution">-ವಚನಕಾರ ಶಿವಲೆಂಕ ಮಂಚಣ್ಣ</span></div>.<div><blockquote>ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ, ನಮ್ಮ ಉಸಿರು ಉಡುಗುತ್ತಾ ಬಂದಂತೆ</blockquote><span class="attribution">-ಕೆ.ಪಿ. ಪೂರ್ಣಚಂದ್ರ ತೇಜಸ್ವಿ</span></div>.<div><blockquote> ಗುಲಾಬಿಯೆಂದರೆಅಮ್ಮನಿಗೆ ಇಷ್ಟಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಕಷ್ಟ</blockquote><span class="attribution">-ಬಿ.ಎಂ. ಬಶೀರ್</span></div>.<div><blockquote>ಕುರಿಗಳ ಕಾಯುವ ಕುರುಬನ ಕೂಗುಜನರ ಮಾತು ಕವನಸೋತ ರಟ್ಟೆಗಳ ಹೂತ ಕಾಲುಗಳಬೆವರ ಹಸಿರು ಕವನ</blockquote><span class="attribution">- ಸಿದ್ದಲಿಂಗಯ್ಯ</span></div>.<div><blockquote>ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ,ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ</blockquote><span class="attribution">-ಬಿ.ಆರ್. ಲಕ್ಷ್ಮಣರಾವ್</span></div>.<div><blockquote>ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ; ಬರಲಿ ವಿಜ್ಞಾನ ಬುದ್ಧಿ</blockquote><span class="attribution">- ರಾಷ್ಟ್ರಕವಿ ಕುವೆಂಪು</span></div>.<div><blockquote>ಜನಮನದ ನುಡಿಯಾಗಿ ಬಾಳು ತಾಯಿ, ಮೂಕಜನರಿಗು ಕೂಡ ಬರಲಿ ಬಾಯಿ</blockquote><span class="attribution">-ದಿನಕರ ದೇಸಾಯಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>