ನವದೆಹಲಿ: ಇಂದಿನಿಂದ (ಜ.31, ಸೋಮವಾರ) ಬಜೆಟ್ ಅಧಿವೇಶನ (2022) ಆರಂಭವಾಗಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳೊಂದಿಗೆ ಮಾತನಾಡಿ, ಸದನದಲ್ಲಿ ಅರ್ಥಪೂರ್ಣ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿಪಕ್ಷಗಳನ್ನು ವಿನಂತಿ ಮಾಡಿದರು.
ಪ್ರಧಾನಿ ಮೋದಿಭಾಷಣವನ್ನುತರಾಟೆಗೆ ತೆಗೆದುಕೊಂಡಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ತಮ್ಮ ಭಾಷಣದಲ್ಲಿ 2014ರಿಂದ ಸರ್ಕಾರದ ಸಾಧನೆಗಳನ್ನು ಮಾತ್ರ ಎತ್ತಿ ತೋರಿಸಿದ್ದಾರೆ ಎಂದು ಟೀಕಿಸಿದ್ದಾರೆ.
In his speech, he (PM Modi) only highlighted govt's achievements from 2014. No mention of Chinese aggression (at LAC), inflation, unemployment, railway recruitment...There was nothing substantial in his speech; it reflected (speech) govt's failure: Mallikarjun Kharge, LoP in RS pic.twitter.com/6aOJZiawia
'ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಚೀನಾದ ಅತಿಕ್ರಮಣ, ಹಣದುಬ್ಬರ, ನಿರುದ್ಯೋಗ, ರೈಲ್ವೆ ನೇಮಕಾತಿ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಅವರ (ಪ್ರಧಾನಿ) ಮಾತಿನಲ್ಲಿ ಪ್ರಮುಖವಾದ ವಿಷಯಗಳೇನು ಇರಲಿಲ್ಲ. ಇದು ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ' ಎಂದು ಆರೋಪಿಸಿದರು.
ಬಜೆಟ್ ಅಧಿವೇಶನದಲ್ಲಿ ಪೆಗಾಸಸ್ ಕುತಂತ್ರಾಂಶ ಖರೀದಿ, ಕೃಷಿಕರ ಸಮಸ್ಯೆ, ಗಡಿಯಲ್ಲಿ ಚೀನಾದ ಅತಿಕ್ರಮಣ ಮುಂತಾದ ವಿಷಯಗಳ ಕುರಿತಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿವೆ.