ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ಗಳಲ್ಲಿ ವಿಚಾರಣೆ ಹಂತದಲ್ಲಿ ಇರುವ ಗೃಹ ನಿರ್ಮಾಣ ಯೋಜನೆಗಳಿಗೆ ಈ ನಿಧಿಯ ಹಣ ಬಳಸುವಂತಿಲ್ಲ ಎಂದು ತಿಳಿಸಿದೆ. ಹಣಕಾಸು ನೆರವು ದೊರೆಯದೆ ಸ್ಥಗಿತಗೊಂಡಿರುವ ಕೈಗೆಟುಕುವ ದರ ಮತ್ತು ಮಧ್ಯಮ ಆದಾಯದವರಿಗಾಗಿ ಇರುವ ಗೃಹ ನಿರ್ಮಾಣ ಚಟುವಟಿಕೆಗಳಿಗೆ ಆದ್ಯತೆ ನೀಡಲು ಈ ನಿಧಿ ಸ್ಥಾಪಿಸಲಾಗಿದೆ. ಪೂರ್ಣಗೊಳ್ಳಲು ಕೊನೆಯ ಹಂತದಲ್ಲಿ ಇರುವಯೋಜನೆಗಳಿಗೆ ಹಣಕಾಸು ನೆರವುಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.