ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಬೆಂಗಳೂರು ವೃತ್ತದ ಜಾಗೃತಿ ಸಪ್ತಾಹ ಕಾರ್ಯಕ್ರಮವನ್ನು ಸಿಬಿಐ ಡಿವೈಎಸ್ಪಿ ಸತೀಶ್ ಚಂದ್ರ ಝಾ ಈಚೆಗೆ ಉದ್ಘಾಟಿಸಿದರು. ದಕ್ಷಿಣ ವಲಯದ ವ್ಯವಸ್ಥಾಪಕ ನಿರ್ದೇಶಕ ಸುಭಾಶಿಶ್ ಭಟ್ಟಾಚಾರ್ಯ, ನೆಟ್ವರ್ಕ್–2ನ ಜನರಲ್ ಮ್ಯಾನೇಜರ್ ಸಂದೀಪ್ ಭಟ್ನಾಗರ್, ನೆಟ್ವರ್ಕ್–3ರ ಜನರಲ್ ಮ್ಯಾನೇಜರ್ ಅನುರಾಗ್ ಜೋಷಿ, ಬಿಸಿಡಿ ಜನರಲ್ ಮ್ಯಾನೇಜರ್ ಶ್ರೀಧರ ನಾರಾಯಣ ಕುಲಕರ್ಣಿ, ಜಾಗೃತಿ ವಿಭಾಗದ ಉಪ ಜನರಲ್ ಮ್ಯಾನೇಜರ್ ರಮೇಶ್ ಎಸ್. ಇದ್ದರು.