ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ್ದ ಬ್ಯಾಂಕ್ಗಳ ಉದ್ಯೋಗಿಗಳು ಮತ್ತು ಬ್ಯಾಂಕ್ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ‘ಸಹವರ್ತಿ ಬ್ಯಾಂಕ್ಗಳನ್ನು ಎಸ್ಬಿಐನೊಂದಿಗೆ ವಿಲೀನಗೊಳಿಸಿದ ಬಳಿಕ ನಷ್ಟದ ಪ್ರಮಾಣ ₹ 1.77 ಲಕ್ಷ ಕೋಟಿಯಿಂದ ₹ 2.25 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ವಿಲೀನಕ್ಕೆ ಬದಲಾಗಿ ಬ್ಯಾಂಕ್ಗಳನ್ನು ಆರ್ಥಿಕವಾಗಿ ಬಲಪಡಿಸಲು ಸರ್ಕಾರ ಗಮನ ಹರಿಸಬೇಕು’ ಎಂದುಯುಎಫ್ಬಿಯುನ ಕರ್ನಾಟಕದ ಸಂಚಾಲಕ ಎಚ್.ವಿ.ರೈ ಒತ್ತಾಯಿಸಿದರು.