ಬೆಂಗಳೂರು: ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ನ (ಬಿಇಎಂಎಲ್) ನಿರ್ದೇಶಕರಾಗಿ (ರಕ್ಷಣಾ ವಹಿವಾಟು) ಎ. ಕೆ. ಶ್ರೀವಾಸ್ತವ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಶ್ರೀವಾಸ್ತವ ಅವರನ್ನು ಕಂಪನಿಯ ನಿರ್ದೇಶಕ ಮಂಡಳಿಯ ಸದಸ್ಯರನ್ನಾಗಿಯೂ ನಾಮಕರಣ ಮಾಡಲಾಗಿದೆ. 1987ರಲ್ಲಿ ಇವರು ‘ಬಿಇಎಂಎಲ್’ನಲ್ಲಿ ಎಂಜಿನಿಯರ್ ಟ್ರೇನಿಯಾಗಿ ಕೆಲಸಕ್ಕೆ ಸೇರಿದ್ದರು.